‘ನಿಜವಾದ ಹಿಂದುತ್ವವಾದಿ ಮಹಾತ್ಮಾ ಗಾಂಧಿಯ ಬದಲು ಜಿನ್ನಾ ಮೇಲೆ ಗುಂಡು‌ ಹಾರಿಸುತ್ತಿದ್ದ’; ಸಂಜಯ್ ರಾವತ್

Prasthutha|

ಮುಂಬೈ: ನಿಜವಾದ ಹಿಂದುತ್ವವಾದಿಯು ಮಹಾತ್ಮ ಗಾಂಧಿಯ ಬದಲು ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾರ ಮೇಲೆ ಗುಂಡು ಹಾರಿಸುತ್ತಿದ್ದ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಟ್ವೀಟ್’ಗೆ ಪ್ರತಿಕ್ರಿಯಿಸುವ ವೇಳೆ ರಾವತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

- Advertisement -


“ಓರ್ವ ಹಿಂದುತ್ವವಾದಿಯಿಂದ ಮಹಾತ್ಮ ಗಾಂಧಿಯವರ ಹತ್ಯೆಯಾಯಿತು. ಎಲ್ಲಾ ಹಿಂದುತ್ವವಾದಿಗಳು ಗಾಂಧಿ ಇಲ್ಲ ಎಂದು ಭಾವಿಸಿದ್ದಾರೆ. ಸತ್ಯವು ಇರುವವರೆಗೆ ಬಾಪು ಎಂದಿಗೂ ಜೀವಿಸಿರುತ್ತಾರೆ. #ಎಂದೆಂದಿಗೂ ಗಾಂಧಿ” ಎಂದು ಮಹಾತ್ಮ ಗಾಂಧಿಯವರ 74ನೇ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.


ಸುದ್ದಿಗಾರರ ಜೊತೆ ಮಾತನಾಡುವ ವೇಳೆ ಈ ಕುರಿತು ಪ್ರತಿಕ್ರಿಯಿಸಿದ ಸಂಜಯ್ ರಾವತ್, ‘ಭಾರತ ವಿಭಜನೆಗೆ,‌ ಪಾಕಿಸ್ತಾನ ರಚನೆಗೆ ಪ್ರಮುಖ ಕಾರಣಕರ್ತನಾಗಿದ್ದು ಮುಹಮ್ಮದ್ ಅಲಿ ಜಿನ್ನಾ. ಆ ಸಮಯದಲ್ಲಿ ಒಂದು ವೇಳೆ ನಿಜವಾದ ಹಿಂದುತ್ವವಾದಿ ಯಾರಾದರೂ ಇದ್ದಿದ್ದರೆ, ಮಹಾತ್ಮ‌ಗಾಂಧಿಯವರ ಬದಲು, ಭಾರತ ವಿಭಜನೆಗೆ ಕಾರಣಕರ್ತನಾದ ಮುಹಮ್ಮದ್ ಅಲಿ ಜಿನ್ನಾರ ಮೇಲೆ ಗುಂಡು ಹಾರಿಸುತ್ತಿದ್ದ. ಅದು ದೇಶಭಕ್ತಿಯ ಕಾರ್ಯವಾಗುತ್ತಿತ್ತು. ಗಾಂಧಿಯವರ ಹತ್ಯೆಯನ್ನು ಇಂದಿಗೂ ಜಗತ್ತು ದುಃಖದಿಂದಲೇ ಸ್ಮರಿಸುತ್ತಿದೆ ಎಂದಿದ್ದಾರೆ.

Join Whatsapp