ಬಿಜೆಪಿ ಮತ್ತು ಫ್ಯಾಸಿಸ್ಟರನ್ನು ದೂರವಿಟ್ಟು ಕೈ ಜೋಡಿಸುದಾದರೆ ಯಾರೊಂದಿಗೂ ಮೈತ್ರಿಗೆ ರೆಡಿ: ರಿಯಾಝ್ ಕಡಂಬು

Prasthutha|

-ಅಕ್ಕಿ ಕೊಡುವ ಬದಲು ಅಕ್ಕಿ ಉತ್ಪಾದನೆಗೆ ಭೂಮಿ ಕೊಡಿ :  ಬಿ.ಆರ್. ಭಾಸ್ಕರ್ ಪ್ರಸಾದ್

- Advertisement -

-ಸುರತ್ಕಲ್‌‌ನಲ್ಲಿ SDPI ಸಮಾವೇಶ

ಮಂಗಳೂರು: ಬಿಜೆಪಿ ಮತ್ತು ಫ್ಯಾಸಿಸ್ಟರನ್ನು ದೂರವಿಟ್ಟು ಕೈ ಜೋಡಿಸುವುದಾದರೆ ಯಾರೊಂದಿಗೂ ಮೈತ್ರಿಗೆ ಎಸ್ಡಿಪಿಐ ತಯಾರಿದೆ ಎಂದು ಪಕ್ಷದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು  ಹೇಳಿದ್ದಾರೆ. ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವತಿಯಿಂದ ಸುರತ್ಕಲ್ ಬ್ಲಾಕ್ ಸಮಿತಿಯ ಪಕ್ಷದ ಸಮಾವೇಶದಲ್ಲಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

- Advertisement -

ಎಸ್ಡಿಪಿಐ ರಾಜ್ಯ  ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್  ಮಾತಾಡಿ, ದಿನದ 24 ಗಂಟೆ, ವರ್ಷದ 365 ದಿನಗಳಲ್ಲಿ ಜನರ, ರಾಜ್ಯದ ಮತ್ತು ದೇಶದ ಬಗ್ಗೆ ಯೋಚನೆಯನ್ನು ಮಾಡುವ ಎಸ್ಡಿಪಿಐ ಯನ್ನು ಬಲಪಡಿಸುವ ಜವಾಬ್ದಾರಿ ಎಲ್ಲರಿಗೂ ಇದೆ ಎಂದು ಹೇಳಿದರು.  ಈಗಿನ ಸ್ಥಿತಿಗತಿಗಳ ವಿಷಯ ಬಗ್ಗೆ ಪ್ರಸ್ತಾಪಿಸಿದ ಅವರು ಎಸ್ಡಿಪಿಐ ಪಕ್ಷದ ಅಗತ್ಯತೆಯನ್ನು ತಿಳಿಸಿದರು. ಕಾರ್ಯಕ್ರಮದ ಸಮಾರೋಪದಲ್ಲಿ ಎಸ್ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ,  ಪಕ್ಷದ ಅನಿವಾರ್ಯತೆಯನ್ನು ತಿಳಿಸಿ ಪಕ್ಷವನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಸಮಾವೇಶವು ಎಸ್ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಗುರುಪುರ ಅಧ್ಯಕ್ಷತೆಯಲ್ಲಿ ಎಂ.ಜೆ.ಎಂ. ಹಾಲ್ ಚೊಕ್ಕಬೆಟ್ಟುವಿನಲ್ಲಿ ನಡೆಯಿತು. ಕ್ಷೇತ್ರ ಕಾರ್ಯದರ್ಶಿ ಅಝರ್ ಉಳಾಯಿಬೆಟ್ಟು ಸ್ವಾಗತಿಸಿದ ಕಾರ್ಯಕ್ರಮವನ್ನು ಎಸ್ಡಿಪಿಐ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಸದಸ್ಯ ಶಂಶುದ್ದೀನ್ ಕೃಷ್ಣಾಪುರ ನಿರೂಪಣೆ ಮಾಡಿ ಧನ್ಯವಾದ ಅರ್ಪಿಸಿದರು.

ನಾಸಿರ್ ಉಳಾಯಿಬೆಟ್ಟು (ಉಪಾಧ್ಯಕ್ಷರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ), ನೂರುಲ್ಲಾ ಕುಳಾಯಿ (ಕಾರ್ಯದರ್ಶಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ), ಶಂಶಾದ್ ಅಬೂಬಕ್ಕರ್ (ಸದಸ್ಯರು ಮಂಗಳೂರು ಮಹಾನಗರ ಪಾಲಿಕೆ), ಸುರತ್ಕಲ್ ಬ್ಲಾಕ್ ಅಧ್ಯಕ್ಷ ಸಲಾಂ ಕಾನ, ಕ್ಷೇತ್ರ ಸಮಿತಿ ನಾಯಕರು, ಬ್ಲಾಕ್ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಮತ್ತು ಬೆಂಬಲಿಗರು ಉಪಸ್ಥಿತರಿದ್ದರು.

Join Whatsapp