ಟಿಪ್ಪು ಕುರಿತ ಚರ್ಚೆಗೆ ಸಿದ್ದ: ಸಂಸದ ಪ್ರತಾಪ್ ಸಿಂಹಗೆ ಪ್ರೊ.ಬಿ.ಕೆ.ಚಂದ್ರಶೇಖರ್ ಸವಾಲು

Prasthutha|

ಮೈಸೂರು: ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ನಾಡಿಗೆ ನೀಡಿರುವ ಕೊಡುಗೆಯ ಬಗ್ಗೆ ತಗಾದೆ ಎತ್ತಿರುವ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹರೊಂದಿಗೆ ಯಾವ ಸಮಯದಲ್ಲೂ ವಿಚಾರ ವಿನಿಮಯಕ್ಕೆ ಸಿದ್ಧ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಹೇಳಿದ್ದಾರೆ.

- Advertisement -

ಇದನ್ನೂ ಓದಿ ‘ಟಿಪ್ಪು ಎಕ್ಸ್‌ಪ್ರೆಸ್‌’ ಬದಲು ‘ಒಡೆಯರ್ ಎಕ್ಸ್‌ಪ್ರೆಸ್‌’ ಎಂದು ಮರುನಾಮಕರಣ ಮಾಡಬೇಕು:ಸಂಸದ ಪ್ರತಾಪ್ ಸಿಂಹ

ಟಿಪ್ಪು ಸಮರ್ಥಕರು ಆತ ನಾಡಿಗೆ ನೀಡಿರುವ 3 ಕೊಡುಗೆಗಳ ಬಗ್ಗೆ ತಿಳಿಸಲಿ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನೂ ಕೂಡ ಒಂದಷ್ಟು ಆಧಾರಗಳನ್ನು ಇಟ್ಟುಕೊಂಡಿದ್ದೇನೆ. ಹಾಗಾಗಿ ಪ್ರತಾಪಸಿಂಹ ಒಪ್ಪಿಕೊಂಡು ಸಮಯ ತಿಳಿಸಿದರೆ ವಿಚಾರ ವಿನಿಮಯ ಮಾಡಿಕೊಳ್ಳೋಣ ಎಂದು ತಿಳಿಸಿದ್ದಾರೆ.

Join Whatsapp