`ಹಿಂದುತ್ವದ ಭದ್ರಕೋಟೆಯಲ್ಲೇ ಹೆಣ್ಮಕ್ಕಳ ರೇಪ್ & ಮರ್ಡರ್’: ಬಿಜೆಪಿಗೆ SDPI ಮುಖಂಡ ತಿರುಗೇಟು

Prasthutha|

‘ಸೌಜನ್ಯ ಪ್ರಕರಣದಲ್ಲಿ ಕ್ರೌರ್ಯ ಮೆರೆದಾಗ ಎಲ್ಲಿ ಮೂಲೆಗೆ ಬಿದ್ದಿತ್ತು ಹಿಂದುತ್ವ?’

- Advertisement -

ಮಂಗಳೂರು : ಹಿಂದುತ್ವದ ಭದ್ರಕೋಟೆ ಮುಟ್ಟಲು ಬಂದ್ರೆ ನೂಚ್ಚುನೂರಾಗ್ತೀರಾ ಎಂಬ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ ಹೇಳಿಕೆಗೆ ಎಸ್ ಡಿಪಿಐ ರಾಜ್ಯ ಮುಖಂಡ ರಿಯಾಝ್ ಕಡಂಬು ತಿರುಗೇಟು ನೀಡಿದ್ದಾರೆ.

ಈ ಸಂಬಂಧ ತಮ್ಮ ಸಾಮಾಜಿಕ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ದ.ಕ ಜಿಲ್ಲೆಯ ಯಾವ ಮೂಲೆಯಲ್ಲಿ ಬಾಂಬ್ ತಯಾರಿಕ ಘಕಟವನ್ನು ಇಟ್ಟು ಕೊಂಡಿದ್ದೀರಿ ಎಂದು ಕಿಶೋರ್ ಬೊಟ್ಯಾಡಿ ಅವರನ್ನು ಪ್ರಶ್ನಿಸಿದ್ದಾರೆ. ಬಾಂಬ್ ಸ್ಫೋಟದ ಮೂಲಕ ನುಚ್ಚು ನೂರಾಗಿಸುವ ಬೆದರಿಕೆ ಹಾಕುತ್ತಿದ್ದೀರಾ? ಇದು ಭಯ ಪಡಿಸಿ ಬೆದರಿಸಿ ರಾಜಕೀಯ ಮಾಡುವ ಹುನ್ನಾರವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಭಯೋತ್ಪಾದಕ ಮಾತುಗಳಿಂದ ಸಮಾಜದ ಮುಂದೆ ಬರಬೇಡಿ ಎಂದು ತಾಕಿತು ಮಾಡಿದ್ದಾರೆ.

- Advertisement -


ಕಿಶೋರ್ ಬೊಟ್ಯಾಡಿ ಹೇಳಿಕೆ ಸಂಬಂಧ ಸರಣಿ ಪ್ರಶ್ನೆಗಳನ್ನು ಕೇಳಿರುವ ಅವರು, RSS ಭೌದ್ಧಿಕ್ ಪ್ರಮುಖ್ ಆಗಿದ್ದ ಮೋಹನ ಎಂಬ ಅಧ್ಯಾಪಕ ಅಮಾಯಕ 17 ಹೆಣ್ಮಕ್ಕಳನ್ನು ಅತ್ಯಾಚಾರಗೈದು ಅಸಿಡ್ ಹಾಕಿ ಕೊಂದು ತೇಗಿದಾಗ ಎಲ್ಲಿ ಸತ್ತು ಹೋಗಿತ್ತು ನುಚ್ಚು ನೂರಾಗಿಸುವ ಹಿಂದುತ್ವದ ಭದ್ರಕೋಟೆ?’ ಎಂದು ಅವರು ಪ್ರಶ್ನಿಸಿದ್ದಾರೆ. ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಹೆಣ್ಣನ್ನು ಅತ್ಯಾಚಾರ ಮಾಡಿ, ಪ್ರತಿಷ್ಟಿತರ ಕೈವಾಡದಿಂದ ಅಮಾಯಕನೊಬ್ಬನ ಬಂಧಿಸಿ ಕ್ರೌರ್ಯ ಮೆರೆದಾಗ ಎಲ್ಲಿ ಮೂಲೆಗೆ ಬಿದ್ದಿತು ಹಿಂದುತ್ವ?, ಆಳ್ವಾಸ್ ಕಾಲೇಜಿನ ಕಾವ್ಯ ಪೂಜಾರಿ ಕೊಲೆ ಪ್ರಕರಣದಲ್ಲಿ ನ್ಯಾಯ ಕೊಡದೆ ಕೇಸನ್ನು ಮುಚ್ಚಿ ಹಾಕಿದಾಗ, ಬಿಜೆಪಿ ಸ್ಥಳೀಯ ನಾಯಕನಿಂದ ಅಮಾಯಕ ದಿನೇಶ್ ಕನ್ಯಾಡಿ ಕೊಲೆ ನಡೆದಾಗ, ಹರೀಶ್ ಕುಮಾರ್ ಕೊಲೆಯನ್ನು ಮುಸ್ಲಿಂ ಎಂದು ತಪ್ಪಾಗಿ ಸಂಘದ ಗೂಂಡಾಗಳು ನಡೆಸಿದಾಗ ಎಲ್ಲಿ ಸತ್ತು ಹೋಗಿತ್ತು ನಿಮ್ಮ ಹಿಂದುತ್ವದ ಭದ್ರಾಕೋಟೆ’ ಎಂದು ರಿಯಾಝ್ ಕಡಂಬು ಖಾರವಾಗಿ ಪ್ರಶ್ನಿಸಿದ್ದಾರೆ.


`ಕೊರೋನಾ ವೇಳೆ ಹಿಂದೂಗಳ ಶವಗಳನ್ನು ಅಂತ್ಯ ಸಂಸ್ಕಾರ ಮಾಡಲು ಯಾರೂ ಮುಂದೆ ಬರದಿದ್ದಾಗ ಮುಸ್ಲಿಮರು ಅವರ ಧರ್ಮಕ್ಕನುಸಾರ ನಡೆಸಿಕೊಟ್ಟಾಗ ಹಿಂದುತ್ವದ ಭದ್ರಾಕೋಟೆ ಎಲ್ಲಿ ಮುಳುಗಿ ಹೋಗಿತ್ತು? ಎಂದು ರಿಯಾಝ್ ಕಡಂಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp