ರಾಜ್ಯದಲ್ಲಿ ತಾಂಡವವಾಡುತ್ತಿರುವ 40% ಕಮಿಷನ್ ಪೆಡಂಭೂತ: ರಣದೀಪ್ ಸುರ್ಜೇವಾಲ

Prasthutha|

ಬೆಂಗಳೂರು: ರಾಜ್ಯದಲ್ಲಿ 40% ಕಮಿಷನ್ ಪೆಡಂಭೂತ ತಾಂಡವವಾಡುತ್ತಿದೆ ಎಂದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕಿಸಿದ್ದಾರೆ.

- Advertisement -


ಈ ಬಗ್ಗೆಟ್ವೀಟ್ ಮಾಡಿರುವ ಅವರು, ಈ ಕಮಿಷನ್ ಭೂತಕ್ಕೆ ಬಲಿಯಾದ ಸಂತೋಷ್ ಪಾಟೀಲ್ ಪ್ರಧಾನಿಗೆ ಪತ್ರ ಬರೆದರೂ ಅದು ಪ್ರಧಾನಿ ಸಚಿವಾಲಯದ ಕಸದ ಬುಟ್ಟಿ ಸೇರಿತ್ತು ಎಂದು ಹೇಳಿದ್ದಾರೆ.


ಈಗ ಗುತ್ತಿಗೆದಾರರ ಸಂಘದ ಸರದಿ. ಈಗಲಾದರೂ ನಿಷ್ಪಕ್ಷಪಾತ ತನಿಖೆ ನಡೆಯಬಹುದೇ? ಆರೋಪಿತ ಸರ್ಕಾರದ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.



Join Whatsapp