ಆಮಿರ್‌ ಖಾನ್‌ ವೀಡಿಯೊ ಟ್ವೀಟ್ ಮಾಡಿದ ರಾಮ್‌ ದೇವ್‌ | ನಟನ ವಿರುದ್ಧ ಕ್ರಮ ಕೈಗೊಳ್ಳಲು ಐಎಂಎಗೆ ಸವಾಲು

Prasthutha|

ನವದೆಹಲಿ : ಅಲೋಪಥಿಕ್‌ ವೈದ್ಯಕೀಯ ವ್ಯವಸ್ಥೆ ಕುರಿತಂತೆ ತಮ್ಮ ಆಕ್ಷೇಪಾರ್ಹ ಹೇಳಿಕೆಗಳಿಂದ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ)ಯ ಕೆಂಗಣ್ಣಿಗೆ ಗುರಿಯಾಗಿರುವ ಯೋಗಗುರು ಬಾಬಾ ರಾಮ್‌ ದೇವ್‌, ಬಾಲಿವುಡ್‌ ನಟ ಆಮಿರ್‌ ಖಾನ್‌ ಅವರ ʼಸತ್ಯಮೇವ ಜಯತೇʼ ಕಾರ್ಯಕ್ರಮದ ವೀಡಿಯೊವೊಂದನ್ನು ಟ್ವೀಟ್‌ ಮಾಡಿ, ಇವರ ಮೇಲೆ ಕ್ರಮ ಕೈಗೊಳ್ಳಲು ಧೈರ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.

- Advertisement -

ಆಮಿರ್‌ ಖಾನ್‌ ರ ಈ ಕಾರ್ಯಕ್ರಮದಲ್ಲಿ ಡಾ. ಸಮಿತ್ ಶರ್ಮಾ ಜತೆ ಅವರು ಮಾತನಾಡುವ ದೃಶ್ಯ ವೀಡಿಯೊದಲ್ಲಿದೆ. ಜೆನರಿಕ್‌ ಔಷಧಿ ಮತ್ತು ಬ್ರಾಂಡೆಡ್‌ ಔಷಧಿಗಳ ನಡುವಿನ ಬೆಲೆ ವ್ಯತ್ಯಾಸದ ಬಗ್ಗೆ ಅವರು ಅದರಲ್ಲಿ ವಿವರಿಸುತ್ತಿದ್ದಾರೆ.

ಅಲೋಪಥಿಕ್‌ ವೈದ್ಯ ವ್ಯವಸ್ಥೆಯನ್ನು ಅವಿವೇಕಿ ವೈದ್ಯ ವ್ಯವಸ್ಥೆ ಎಂದಿದ್ದ ಬಾಬಾ ರಾಮ್‌ ದೇವ್‌ ಹೇಳಿಕೆ ವಿರುದ್ಧ ಗರಂ ಆಗಿದ್ದ ಐಎಂಎ ಅವರ ವಿರುದ್ಧ ಆರೋಗ್ಯ ಸಚಿವಾಲಯಕ್ಕೆ ದೂರು ನೀಡಿದ್ದರು. ಆ ಬಳಿಕ ರಾಮ್‌ ದೇವ್‌ ಈ ಬಗ್ಗೆ ವಿಷಾಧ ವ್ಯಕ್ತಪಡಿಸಿದ್ದರು.  

Join Whatsapp