ನೀವು ಏನು ಮಾಡುತ್ತೀರಿ ? ಪೆಟ್ರೋಲ್ ಬೆಲೆಯೇರಿಕೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ ಬಾಬಾ ರಾಮ್ ದೇವ್ ಬೆದರಿಕೆ !

Prasthutha|

ಹೊಸದಿಲ್ಲಿ: ದೇಶದಲ್ಲಿ ಸತತ 9ದಿನಗಳಿಂದ ಪೆಟ್ರೋಲ್-ಡೀಸೆಲ್ ಬೆಲೆ ಏರುತ್ತಲೇ ಇದೆ. ಈ ಕುರಿತು ಪತ್ರಕರ್ತರೊಬ್ಬರು ಪತಂಜಲಿ ಮುಖ್ಯಸ್ಥ ಬಾಬಾ ರಾಮ್ ದೇವ್ ಬಳಿ ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸಿದ್ದಾರೆ. ಇದೇ ವೇಳೆ ಪತ್ರಕರ್ತನ ಪ್ರಶ್ನೆಗೆ ಸಿಡಿಮಿಡಿಗೊಂಡ ರಾಮ್ ದೇವ್ ಬೆದರಿಕೆ ಒಡ್ಇಡರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

ಪರ್ತಕರ್ತರೊಬ್ಬರು ಪೆಟ್ರೋಲ್ ಬೆಲೆ ಇಳಿಕೆ ಕುರಿತು ರಾಮ್ ದೇವ್ ಈ ಹಿಂದೆ ನೀಡಿದ್ದ ಹೇಳಿಕೆಗಳ ಬಗ್ಗೆ ಪ್ರಶ್ನಿಸಿದ್ದಾರೆ., ಲೀಟರ್‌ಗೆ ರೂ 40 ಗೆ ಪೆಟ್ರೋಲ್ ಮತ್ತು ರೂ 300 ಸಿಲಿಂಡರ್‌ಗೆ ಅಡುಗೆ ಅನಿಲವನ್ನು ಖಚಿತಪಡಿಸುವ ಸರ್ಕಾರವನ್ನು ಪರಿಗಣಿಸಬೇಕಾ ಎಂದು ಪತ್ರಕರ್ತರೊಬ್ಬರು ಪತಂಜಲಿ ಬ್ರಾಂಡ್ ಅಂಬಾಸಿಡರ್‌ಗೆ ಮಾಧ್ಯಮಗಳಿಗೆ ನೀಡಿದ ಹೇಳಿಕೆಯ ಬಗ್ಗೆ ಕೇಳಿದ್ದಾರೆ. ಈ ಸಂದರ್ಭ ಗಲಿಬಿಲಿಗೊಂಡ ರಾಮ್‌ದೇವ್, ಹೌದು, ನಾನು ಹೇಳಿದ್ದೇನೆ, ನೀವು ಏನು ಮಾಡುತ್ತೀರಿ? ಇಂತಹ ಪ್ರಶ್ನೆಗಳನ್ನು ಕೇಳಬೇಡಿ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಾನು ನಿಮ್ಮ ಗುತ್ತಿಗೆದಾರ ಅಲ್ಲ ಎಂದಿದ್ದಾರೆ.

ರಾಮ್ ದೇವ್ ಬೆದರಿಕೆಗೆ ಜಗ್ಗದ ಪತ್ರಕರ್ತ ಮತ್ತದೇ ಪ್ರಶ್ನೆಯನ್ನು ಕೇಳಲು ಯತ್ನಿಸಿದಾಗ, ಪತ್ರಕರ್ತರತ್ತ ಬೊಟ್ಟು ಮಾಡಿದ ರಾಮ್‌ದೇವ್, ನಾನು ಕಾಮೆಂಟ್ ಮಾಡಿದ್ದೇನೆ, ನೀವು ಏನು ಮಾಡುತ್ತೀರಿ? ಸುಮ್ಮನಿರಿ, ನೀವು ಮತ್ತೆ ಕೇಳಿದರೆ, ಅದು ಒಳ್ಳೆಯದಲ್ಲ. ಈ ರೀತಿ ಮಾತನಾಡಬೇಡಿ ಎಂದು ಹೇಳಿದ್ದಾರೆ.

Join Whatsapp