ಗಾಂಧೀಜಿಯನ್ನು ಹತ್ಯೆ ಮಾಡಿದಂತೆ, ಇದೀಗ ರಾಷ್ಟ್ರದ ಪರ ಧ್ವನಿ ಎತ್ತಿದವರನ್ನು ಗುರಿ ಮಾಡಲಾಗುತ್ತಿದೆ: ರಾಕೇಶ್ ಟಿಕಾಯತ್

Prasthutha|

ಮೀರತ್: ಮಹಾತ್ಮ ಗಾಂಧೀಜಿಯವರನ್ನು ಪಿತೂರಿಯಿಂದ ಹತ್ಯೆ ಮಾಡಿದಂತೆ, ಇದೀಗ ರಾಷ್ಟ್ರದ ಪರ ಹಾಗೂ ರೈತರ ಪರ ಧ್ವನಿ ಎತ್ತಿದವರನ್ನು ಗುರಿ ಮಾಡಲಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.

- Advertisement -

ರಾಜ್ಯದಲ್ಲಿ‌ ಇತ್ತೀಚೆಗೆ ತಮಗೆ ಮಸಿ ಎರಚಿದ ಘಟನೆ ಪೂರ್ವ ನಿಯೋಜಿತ ಪಿತೂರಿ ಎಂದು ಅವರು ಹೇಳಿದ್ದಾರೆ.
ಮೀರರ್ ಜಿಲ್ಲೆಯ ಜಂಗೇತಿ ಗ್ರಾಮದ ಧರ್ಮೇಶ್ವರಿ ಫಾಮ್‌ ರ್ಹೌಸ್‌ನಲ್ಲಿ ನಡೆದ ಬಿಕೆಯು ಸಭೆಯಲ್ಲಿ ಮಾತನಾಡಿದ ಅವರು, ಟಿಕಾಯತ್ ಕುಟುಂಬವನ್ನು ಮತ್ತು ಸಂಘಟನೆಯನ್ನು ಒಡೆಯಲು ಸರ್ಕಾರ ನನ್ನನ್ನು ಕೊಲ್ಲಿಸಲು ಬಯಸಿದೆ. ಆದರೆ ಇದು ಎಂದಿಗೂ ಸಾಧ್ಯವಾಗದು ಎಂದು ಅವರು ಹೇಳಿದರು.

Join Whatsapp