ರಾಜ್ಯಸಭೆ ಅಧಿವೇಶನ| ಶೇ. 100 ರಷ್ಟು ಹಾಜರಾತಿ ಪಡೆದ ಕೇವಲ ಏಕೈಕ ಸಂಸದ!

Prasthutha|

ಹೊಸದಿಲ್ಲಿ: ರಾಜ್ಯಸಭೆಯ ಶೇಕಡಾ 75 ರಷ್ಟು ಸದಸ್ಯರು ಸದನದ ಕಲಾಪಗಳಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದ್ದು, ಒಬ್ಬ ಸಂಸದ ಮಾತ್ರ ಶೇ.100 ಹಾಜರಾತಿಯನ್ನು ಪಡೆದಿದ್ದಾರೆ.

- Advertisement -

AIADMKಯ S.R ಬಾಲಸುಬ್ರಹ್ಮಣ್ಯಂ ಅವರು ಶೇ.100 ಹಾಜರಾತಿಯನ್ನು ಪಡೆದ ಸಂಸದರಾಗಿದ್ದಾರೆ. 75 ವರ್ಷದ ಸಂಸದರು ರಾಜ್ಯಸಭೆಯ ಏಳು ಅಧಿವೇಶನಗಳ 138 ಸಭೆಗಳಲ್ಲೂ ಭಾಗವಹಿಸಿದ್ದಾರೆ. 2%ಕ್ಕಿಂತ ಕಡಿಮೆ ಇರುವ ಸದಸ್ಯರು ಸಂಪೂರ್ಣ ಗೈರು ಹಾಜರಿಯಾಗಿದ್ದಾರೆ ಎಂದು ವರದಿಯಾಗಿದ್ದಾರೆ.

ಅಶೋಕ್ ಬಾಜಪೇಯಿ, ನೀರಜ್ ಶೇಖರ್, ವಿಕಾಸ್ ಮಹಾತ್ಮೆ ಮತ್ತು ರಾಮ್ಕುಮಾರ್ ವರ್ಮಾ ಆರು ಅಧಿವೇಶನಗಳ ಎಲ್ಲಾ ಸಭೆಗಳಲ್ಲಿ ಭಾಗವಹಿಸಿದ್ದಾರೆ. ರಾಕೇಶ್ ಸಿನ್ಹಾ, ಸುಧಾಂಶು ತ್ರಿವೇದಿ, ಡಾ. ಕೈಲಾಶ್ ಸೋನಿ, ನರೇಶ್ ಗುಜ್ರಾಲ್, ವಿಶಾಂಬರ ಪ್ರಸಾದ್ ನಿಶಾದ್, ಕುಮಾರ್ ಕೇಟ್ ಖರ್ ಮತ್ತು ಅಮಿ ಯಾಗ್ನಿಕ್ ಐದು ಅಧಿವೇಶನಗಳಲ್ಲಿ ಸಂಪೂರ್ಣ ಭಾಗವಹಿಸಿದ್ದಾರೆ.  

- Advertisement -

Join Whatsapp