ರಾಜಸ್ಥಾನ | ಮೇಲ್ವರ್ಗದವರ ಮಡಕೆಯಿಂದ ನೀರು ಕುಡಿದ ದಲಿತನಿಗೆ ಹಲ್ಲೆ

Prasthutha|

ಕೋಟಾ: ಮೇಲ್ವರ್ಗದವರಿಗೆ ಮೀಸಲಿಟ್ಟ ಪಾತ್ರೆಯಲ್ಲಿ ನೀರು ಕುಡಿದ ಕಾರಣಕ್ಕಾಗಿ ದಲಿತ ವ್ಯಕ್ತಿಗೆ ಕಬ್ಬಿಣದ ರಾಡ್, ದೊಣ್ಣೆಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಿಂದ ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಘಟನೆಗೆ ಸಂಬಂಧ ದಿಗ್ಗಾ ಗ್ರಾಮದ ನಾಲ್ವರು ಮೇಲ್ಜಾತಿಯವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚತುರ್ ರಾಮ್ ಎಂಬಾತ ತನ್ನ ಹೆಂಡತಿಯೊಂದಿಗೆ ದಿಗ್ಗಾಕ್ಕೆ ಹೋಗುತ್ತಿದ್ದಾಗ ಬಾಯಾರಿದ ಕಾರಣಕ್ಕೆ ಕಿರಾಣಿ ಅಂಗಡಿಯೊಂದರ ಹೊರಗೆ ಇರಿಸಿದ್ದ ಪಾತ್ರೆಯಲ್ಲಿ ನೀರು ಕುಡಿದಿದ್ದನು. ಈ ವೇಳೆ ನಾಲ್ಕೈದು ಜನರು ಆತನನ್ನು ನಿಂದಿಸಿ, ಮೇಲ್ಜಾತಿಯವರು ಕುಡಿದ ಮಡಕೆಯಿಂದ ನೀರು ಕುಡಿಯುತ್ತೀಯಾ ಎಂದು ಪ್ರಶ್ನಿಸಿ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.

- Advertisement -

ಘಟನೆಯಿಂದಾಗಿ ರಾಮ್ ಅವರ ಒಂದು ಕಿವಿಯ ಹಿಂದಿನ ಬಾಗಕ್ಕೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತ ನೀಡಿದ ದೂರಿನನ್ವಯ ಆಧಾರದಲ್ಲಿ ಪ್ರಕರಣಲ್ಲಿ ದಾಖಲಿಸಲಾಗಿದೆ.

Join Whatsapp