ರಾಯಚೂರು: ಮೂವರು ಮಕ್ಕಳಿಗೆ ಕಚ್ಚಿದ ಹುಚ್ಚುನಾಯಿ

Prasthutha|

ರಾಯಚೂರು: ಮೂವರು ಮಕ್ಕಳಿಗೆ ಹುಚ್ಚುನಾಯಿ ಕಚ್ಚಿ ಗಂಭೀರವಾದ ಗಾಯಗೊಳಿಸಿದ ಘಟನೆ ರಾಯಚೂರು ಜಿಲ್ಲೆಯ ಯಾರಗೇರಾ ಗ್ರಾಮದಲ್ಲಿ ನಡೆದಿದೆ. ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಯಾರಗೇರಾ ಗ್ರಾಮದಲ್ಲಿ ಪಾವನಿ, ಅಸಿಯಾ, ಅನ್ಸಿಯಾ ಹುಚ್ಚುನಾಯಿ ದಾಳಿಗೊಳಗಾದ ಮಕ್ಕಳು.

ಬುಧವಾರ ಮಧ್ಯಾಹ್ನ ಮನೆಯ ಬಳಿ ಮಕ್ಕಳು ಆಟವಾಡುತ್ತಿದ್ದಾಗ ಹುಚ್ಚುನಾಯಿ ಕಚ್ಚಿದೆ.

- Advertisement -

ಮಕ್ಕಳಿಗೆ ಕಚ್ಚಿ ನಂತರ ಜಾನುವಾರುಗಳ ಮೇಲು ಹುಚ್ಚುನಾಯಿ ದಾಳಿ ಮಾಡಿದೆ. ಈ ವೇಳೆ ಗ್ರಾಮಸ್ಥರು ಎಚ್ಚೆತ್ತು ಹುಚ್ಚುನಾಯಿಯನ್ನು ಕೊಂದು ಹಾಕಿದ್ದಾರೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



Join Whatsapp