ರಾಯಚೂರು: ಉಟ್ಟ ಬಟ್ಟೆಯಲ್ಲೇ ಮಗು ಮಲ ವಿಸರ್ಜನೆ; ಬಿಸಿ ನೀರು ಎರಚಿದ ಶಿಕ್ಷಕ

Prasthutha|

ರಾಯಚೂರು: ಇತ್ತೀಚೆಗೆ ಮಕ್ಕಳಿಗೆ ತಿದ್ದಿ ಬುದ್ದಿ ಹೇಳುವ ಶಿಕ್ಷಕರೇ ಈಗ ವಿಕೃತಿ ಮೆರೆಯುತ್ತಿದ್ದಾರೆ. ಮಕ್ಕಳನ್ನು ಹೊಡೆದು ಕೊಲ್ಲುವುದು, ಕಾಲು ಮುರಿಯುವುದು ಎಲ್ಲ ವರದಿಯಾಗುತ್ತಿದೆ. ಬಿಜಾಪುರದಲ್ಲಿ ಶಿಕ್ಷಕರೊಬ್ಬರು ಮಗು ಶಾಲಾ ಸಮವವಸ್ತ್ರದಲ್ಲೇ ಮಲ ವಿಸರ್ಜನೆ ಮಾಡಿದ್ದಕ್ಕೆ ಆಕೆಯ ಮೇಲೆ ಬಿಸಿ ನೀರು ಎರಚಿದ್ದಾನೆ.

- Advertisement -

ಶಿಕ್ಷಿಕ ಹುಲಿಗೆಪ್ಪ ವಿದ್ಯಾರ್ಥಿನಿ ಮೇಲೆ ಬಿಸಿ ನೀರು ಹಾಕಿರುವ ಘಟನೆ ಸಂತೆಕೆಲ್ಲೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಸಿ ನೀರು ಎರಚಲ್ಪಟ್ಟ 2ನೇ ತರಗತಿಯ ವಿದ್ಯಾರ್ಥಿನಿ ಅಖಿತ್‌ ದೇಹ ಶೇ. 40 ರಷ್ಟು ಸುಟ್ಟು ಹೋಗಿದೆ. ಕೂಡಲೇ ದೂರು ನೀಡಿದ್ರೆ ಪೊಲೀಸರು ಮಾತ್ರ ಹಿಂದೇಟು ಹಾಕಿದ್ದಾರೆ ಎಂದು ಕೂಡ ಪೋಷಕರು ಆರೋಪಿಸಿದ್ದಾರೆ.

Join Whatsapp