ಕತಾರ್: ಶಾಲಾ ವಾಹನದಲ್ಲಿ ಮೃತಪಟ್ಟ ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಶಿಕ್ಷಣ ಸಚಿವೆ

Prasthutha|

ಕತಾರ್ : ಶಾಲಾ ವಾಹನದ ಚಾಲಕನ ಬೇಜವಾಬ್ದಾರಿಯಿಂದ ವಾಹನದಲ್ಲೇ ಮೃತಪಟ್ಟ ಮಲಯಾಳಿ ಬಾಲಕಿಯ ಪೋಷಕರನ್ನು ಕತ್ತಾರ್ ಶಿಕ್ಷಣ ಸಚಿವೆ ಬುತೈನಾ ಬಿಂತ್ ಅಲಿ ಅಲ್ ನುಐಮಿ ಭೇಟಿಯಾಗಿ ಸಾಂತ್ವನ ನೀಡಿದ್ದಾರೆ.

- Advertisement -

ಕತ್ತಾರ್‌ನಲ್ಲಿ ಉದ್ಯೋಗದಲ್ಲಿರುವ ಕೇರಳದ ಕೋಟ್ಟಯಂ ನಿವಾಸಿ ಅಭಿಲಾಷ್ ಚಾಕೋ ಮತ್ತು ಸೌಮ್ಯ ದಂಪತಿಯ ನಾಲ್ಕು ವರ್ಷದ ಪುತ್ರಿ ಮಿನ್ಸಾ ಮರಿಯಂ ಜಾಕೋಬ್ ಇಲ್ಲಿನ ಖಾಸಗಿ ಕಿಂಡರ್‌ಗಾರ್ಡನ್‌ನ ಎಲ್‌ಕೆಜಿ ವಿದ್ಯಾರ್ಥಿಯಾಗಿದ್ದು, ಕಳೆದ ರವಿವಾರ ವಿದ್ಯಾ ಸಂಸ್ಥೆಗೆ ಬಸ್ಸಿನಲ್ಲಿ ತೆರಳಿದ ವೇಳೆ ನಿದ್ರೆಗೆ ಜಾರಿದ್ದಳು. ಆದರೆ ಈ ಬಗ್ಗೆ ತಿಳಿಯದೆ ವಾಹನದ ಸಿಬ್ಬಂದಿ ಲಾಕ್ ಮಾಡಿದ್ದು ಬಾಲಕಿ ಉಸಿರುಗಟ್ಟಿ ಮೃತಪಟ್ಟಿದ್ದಳು.

ಘಟನೆ ಸಂಬಂಧ ಖೇದ ವ್ಯಕ್ತಪಡಿಸಿದ್ದ ಶಿಕ್ಷಣ ಸಚಿವೆ ದೋಹಾದ ಅಲ್ ವಕ್ರಾದಲ್ಲಿರುವ ಬಾಲಕಿಯ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಲ್ಲದೇ, ಘಟನೆಗೆ ಕಾರಣರಾದವರ ವಿರುದ್ಧ ಕ್ರಮದ ಭರವಸೆಯನ್ನೂ ನೀಡಿದ್ದಾರೆ.

- Advertisement -

ಬಾಲಕಿ ಕುಟುಂಬದ ಜೊತೆ ಸುಮಾರು ಅರ್ಧ ಗಂಟೆಗಳ ಕಾಲ ಕಳೆದ ಸಚಿವೆ ಕುಟುಂಬಕ್ಕೆ ಬೇಕಾಗುವ ಸಂಪೂರ್ಣ ಸಹಕಾರದ ಭರವಸೆಯೊಂದಿಗೆ ಮರಳಿದ್ದಾರೆ.

Join Whatsapp