ಪುತ್ತೂರು; ಬನ್ನೂರು ವಾರ್ಡಿಗೆ SDPI ನಿಯೋಗ ಭೇಟಿ, ಪ್ರಗತಿ ಪರಿಶೀಲನೆ

Prasthutha|

ಪುತ್ತೂರು: ಪುತ್ತೂರು ನಗರಸಭೆಯ SDPI ಕೌನ್ಸಿಲರ್ ಝೊಹರಾ ರವರ ಬನ್ನೂರು ವಾರ್ಡಿಗೆ SDPI, ಜಿಲ್ಲಾಧ್ಯಕ್ಷ  ಅಥಾವುಲ್ಲಾ ಜೋಕಟ್ಟೆಯವರ ನೇತೃತ್ವದ ಜಿಲ್ಲಾ ನಿಯೋಗವು ಭೇಟಿ ನೀಡಿ ವಾರ್ಡಿನಲ್ಲಿ ಕೈಗೊಂಡ ಕೆಲಸ ಕಾರ್ಯಗಳನ್ನು ವೀಕ್ಷಿಸಿ ಪ್ರಗತಿ ಪರಿಶೀಲನೆ ನಡೆಸಿತು.

- Advertisement -

 ವಾರ್ಡಿನ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿದ ನಿಯೋಗ, ವಾರ್ಡಿನಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳ ಬೇಕಾದ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿತು.

ಜಿಲ್ಲಾ ಕಾರ್ಯದರ್ಶಿ ಗಳಾದ ಅನ್ವರ್ ಸಾದತ್ ಬಜತ್ತೂರು, ಜಮಾಲ್ ಜೋಕಟ್ಟೆ ನಿಯೋಗದಲ್ಲಿದ್ದರು

- Advertisement -

ಈ ಸಂದರ್ಭದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಕೆ. ಎ. ಸಿದ್ದೀಕ್ ಪುತ್ತೂರು, ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಶ್ರಫ್ ಬಾವು, ಸಮಿತಿ ಸದಸ್ಯರಾದ ಪಿಬಿಕೆ ಮುಹಮ್ಮದ್, ನಗರಸಭಾ ಸಮಿತಿ ಅಧ್ಯಕ್ಷರಾದ ಸಿರಾಜ್ ಎ.ಕೆ , ಕೌನ್ಸಿಲರ್ ಝೊಹರಾ, ಸ್ಥಳೀಯ ಮುಖಂಡರಾದ ಜುನೈದ್ ಸಾಲ್ಮರ, ಲತೀಫ್ ಸಾಲ್ಮರ  ಹಿಫಾಸ್ ಬನ್ನೂರು, ಷರೀಫ್ ಬನ್ನೂರು, ಇಬ್ರಾಹಿಂ ಕೆ ಎಂ ಹಾಗೂ ಇತರರು ಉಪಸ್ಥಿತರಿದ್ದರು.

Join Whatsapp