ಪುತ್ತೂರು | ಚರಣ್ ಕೊಲೆ ಪ್ರಕರಣ: ಕಿಶೋರ್ ಪೂಜಾರಿ ತಂಡದಿಂದ ಕೃತ್ಯ?

Prasthutha|

ಪುತ್ತೂರು: ಸಂಘಪರಿವಾರದ ಕಾರ್ಯಕರ್ತ ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ರಾಜ್ ರೈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಿಶೋರ್ ಪೂಜಾರಿ ಕಲ್ಲಡ್ಕ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ತಿಕ್ ಮೇರ್ಲ ಹತ್ಯೆ ಆರೋಪಿಯಾಗಿದ್ದ ಚರಣ್ ರಾಜ್ ಅವರನ್ನು ಶನಿವಾರ ಸಂಜೆ ಮಾರಕ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಚರಣ್ ರಾಜ್ ಜತೆಗಿದ್ದ ನವೀನ್ ನೀಡಿದ ದೂರಿನಂತೆ ಕಿಶೋರ್ ಪೂಜಾರಿ ತಂಡ ಈ ಕೃತ್ಯ ಎಸಗಿರುವ ಬಗ್ಗೆ ಸುಳಿವು ದೊರೆತಿದೆ.

- Advertisement -

ಮೆಡಿಕಲ್ ಶಾಪ್ ನ ಹೊರಗೆ ಕಾರಿನ ಬಳಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಚರಣ್ ಮೇಲೆ ಮೂವರು ತಲವಾರಿನಿಂದ ದಾಳಿ ನಡೆಸಿದ್ದು, ಇದನ್ನು ತಡೆಯಲು ನವೀನ್ ಹೋದಾಗ ಇವರ ಪೈಕಿ ಪರಿಚಿತ ಕಿಶೋರ್ ಪೂಜಾರಿ ಇದ್ದದನ್ನು ಗುರುತಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

2019ರ ಸೆ. 4 ರಂದು ರಾತ್ರಿ 10 ಗಂಟೆ ಸುಮಾರಿಗೆ ಗಣೇಶೋತ್ಸವದ ಪೆಂಡಾಲ್ ನಲ್ಲಿ ಕಾರ್ತಿಕ್ ಮೇರ್ಲ ಹತ್ಯೆ ಮಾಡಲಾಗಿತ್ತು.

Join Whatsapp