ಪುತ್ತೂರು: ಹೊಳೆಗೆ ಬಿದ್ದ ಕಾರು, ಇಬ್ಬರು ಯುವಕರು ನೀರು ಪಾಲು

Prasthutha|

- Advertisement -

ಕಡಬ: ಕಾರೊಂದು ಹೊಳೆಗೆ ಬಿದ್ದ ಘಟನೆ ಶನಿವಾರ ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ನಡೆದಿದ್ದು, ಇಬ್ಬರು ನೀರುಪಾಲಾಗಿದ್ದರೆ.

ನೀರುಪಾಲಾದ ಯುವಕರನ್ನು ವಿಟ್ಲದ ಕುಂಡಡ್ಕ ನಿವಾಸಿ ಧನುಷ್ (26) ಹಾಗೂ ಮಂಜೇಶ್ವರ ನಿವಾಸಿ ಧನುಷ್ (21) ಎಂದು ತಿಳಿದು ಬಂದಿದೆ.

- Advertisement -

ಇವರು ಶನಿವಾರ ತಡರಾತ್ರಿ ಮಾರುತಿ 800 ಕಾರಿನಲ್ಲಿ ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ವೇಳೆ ಬೈತಡ್ಕ ಗೌರಿಹೊಳೆಗೆ ಬಿದ್ದಿದ್ದು, ಈ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.



Join Whatsapp