ಬಂಟ್ವಾಳ | ಗಾಂಧಿ ಹಂತಕ ಗೋಡ್ಸೆ ಹೆಸರು ಆಟೋದಲ್ಲಿ ಹಾಕಿ ಸಮಾಜದಲ್ಲಿ ಆತಂಕ ಸೃಷ್ಟಿಸುವ ಹುನ್ನಾರ: ರಿಯಾಝ್ ಕಡಂಬು

Prasthutha|

ಬಂಟ್ವಾಳ: ಗಾಂಧಿ ಹಂತಕ ಗೋಡ್ಸೆಹೆಸರು ಆಟೋದಲ್ಲಿ ಹಾಕಿ ಸಮಾಜದಲ್ಲಿ ಆತಂಕ ಸೃಷ್ಟಿಸುವ ಹುನ್ನಾರ ಎಂದು ಎಸ್ ಡಿಪಿಐ ರಾಜ್ಯ ನಾಯಕ ರಿಯಾಝ್ ಕಡಂಬು ಆರೋಪಿಸಿದ್ದಾರೆ.

- Advertisement -

ಈ ಬಗ್ಗೆ x ಮಾಡಿರುವ ಅವರು, ದ.ಕ ಜಿಲ್ಲಾ ಎಸ್ ಪಿ ಅವರೇ ಇದೆಲ್ಲಾ ನಿಮ್ಮ ಗಮನಕ್ಕೆ ಬಾರದಿರಲು ಕಾರಣವೇನು? ಇದು ಸಮಾಜದಲ್ಲಿ ಆತಂಕ ಸೃಷ್ಟಿಸುವ ಭಾಗವಲ್ಲವೇ? ಗಾಂಧೀಜಿಯನ್ನು ಗುಂಡಿಟ್ಟು ಕೊಂದ ಗೋಡ್ಸೆಯ ಹೆಸರು ಆಟೋದಲ್ಲಿ ಹಾಕಿ ತಿರುಗುವುದಕ್ಕೆ ಅವಕಾಶವಿದೆಯೇ? ಪೊಲೀಸ್ ಇಲಾಖೆ ಕೂಡಲೇ ಸುಮೊಟೊ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಗಾಝ ಪರ ಸ್ಟೇಟಸ್ ಹಾಕಿದರೆ ಕೇಸು ದಾಖಲಿಸುವ ಸಿದ್ದರಾಮಯ್ಯ ಅವರ ಸರಕಾರ ಇರುವ ರಾಜ್ಯದಲ್ಲಿ ಗೋಡ್ಸೆ ವಾದಿಗಳಿಗೆ ಯಾವುದೇ ತೊಡಕಿಲ್ಲ ಅನ್ನುವುದನ್ನು ಆಶ್ಚರ್ಯವಾಗಿ ಕಾಣಬೇಡಿ.. ಯಾಕೆಂದರೆ ಚುನಾವಣೆಗಿಂತ ಮುಂಚಿನ ಸಿದ್ದರಾಮಯ್ಯ ಬೇರೆ… ಈಗ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಬೇರೆ.

- Advertisement -

ಬಂಟ್ವಾಳ RTO ನೋಂದಣಿ ಇರುವ ಆಟೋದಲ್ಲಿ ಗೋಡ್ಸೆಯ ಹೆಸರನ್ನು ಹಿಂಬಾಗದಲ್ಲಿ  ಗನ್ ನೊಂದಿಗೆ ಹಾಕಲಾಗಿದೆ.

Join Whatsapp