ನಾಲ್ವರ ಬಾಳಲ್ಲಿ ಪುನೀತ್ “ಬೆಳಕು”: ಡಾ.ಭುಜಂಗ ಶೆಟ್ಟಿ

Prasthutha|

ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರಯೋಗ

- Advertisement -

ಬೆಂಗಳೂರು; ಹೃದಯಾಘಾತದಿಂದ ಮೃತಪಟ್ಟ ನಟ ಪುನೀತ್ ರಾಜ್ಕುಮಾರ್ ಅವರ ನೇತ್ರ ದಾನದಿಂದ ನಾಲ್ವರು ಜಗತ್ತನ್ನು ಕಾಣುವಂತಾಗಿದೆ. ಎರಡು ಕಣ್ಣುಗಳನ್ನು ನಾಲ್ವರಿಗೆ ಹೇಗೆ ಅಳವಡಿಸಲಾಯಿತು ಎಂಬುದನ್ನು ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗಶೆಟ್ಟಿ ವಿವರಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ| ಭುಜಂಗಶೆಟ್ಟಿ, ನೂತನ ತಂತ್ರಜ್ಞಾನದ ಸಹಾಯದಿಂದ ಎರಡು ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ.
ಎರಡು ಕಣ್ಣುಗಳನ್ನು ಪೂರ್ಣವಾಗಿ ಇಬ್ಬರಿಗೆ ಅಳವಡಿಸುವ ಬದಲಿಗೆ, ಬೇರೆ ಬೇರೆ ಕಾರಣಗಳಿಂದಾಗಿ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದವರನ್ನು ಗುರುತಿಸಿ ಹೊಸ ತಂತ್ರಜ್ಞಾನದ ಮೂಲಕ ಎರಡು ಕಣ್ಣುಗಳನ್ನು ನಾಲ್ವರಿಗೆ ಅಳವಡಿಸಲಾಗಿದೆ.

- Advertisement -


ಕಣ್ಣಿಮ ಮುಂದಿನ ಭಾಗ ಒಬ್ಬರಿಗೆ, ಅದರ ಹಿಂದಿನ ಭಾಗವನ್ನು ಮತ್ತೊಬ್ಬರಿಗೆ ಜೋಡಿಸಲಾಗಿದೆ. ಹೀಗೆ ಒಂದು ಕಣ್ಣನ್ನು ಇಬ್ಬರಿಗೆ, ಮತ್ತೊಂದು ಕಣ್ಣನ್ನು ಇಬ್ಬರಿಗೆ ಸೇರಿಸಿದಂತೆ ನಾಲ್ವರಿಗೆ ಪುನೀತ್ ರಾಜ್ ಕುಮಾರ್ ಕಣ್ಣನ್ನು ಅಳವಡಿಸಲಾಗಿದೆ ಎಂದರು.


ಇದು ರಾಜ್ಯದಲ್ಲಿ ಮೊದಲನೇಯ ಬಾರಿಗೆ ಈ ರೀತಿಯ ಪ್ರಯೋಗ ನಡೆಸಲಾಗಿದೆ.
ಕಣ್ಣಿನ ತೊಂದರೆ ಅನುಭವಿಸುತ್ತಿದ್ದ ನಾಲ್ವರಿಗೆ ಒಂದೇ ದಿನದಲ್ಲಿ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳನ್ನು ಅಳವಡಿಸಲಾಗಿದೆ. ಶಸ್ತ್ರ ಚಿಕಿತ್ಸೆಯ ಮೂಲಕ ನಾಲ್ವರು ಅಂದರ ಭಾಳಿಗೆ ನಟ ಪುನೀತ್ ರಾಜ್ ಕುಮಾರ್ ಬೆಳಕಾಗಿದ್ದಾರೆ ಎಂದು ತಿಳಿಸಿದರು.



Join Whatsapp