ರಾಜಾರೋಷವಾಗಿ ತಿರುಗಾಡುತ್ತಿರುವ ಸಾತನೂರು ಇದ್ರೀಸ್ ಪಾಷ ಹತ್ಯೆ ಆರೋಪಿ ಪುನೀತ್ ಕೆರೆಹಳ್ಳಿ !

Prasthutha|

ಬೆಂಗಳೂರು: ಸಾತನೂರು ಇದ್ರೀಸ್ ಪಾಷಾ ಅವರ ಹತ್ಯೆ ಆರೋಪಿ ಪುನೀತ್ ಕೆರೆಹಳ್ಳಿ ರಾಜಾರೋಷವಾಗಿ ತಿರುಗಾಡುತ್ತಿರುವುದು ಬೆಳಕಿಗೆ ಬಂದಿದ್ದು, ಕಾರೊಂದರಲ್ಲಿ ಕುಳಿತು ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ.

- Advertisement -

ಆತನನ್ನು ಬಂಧಿಸಲಾಗಿದೆ, ಇನ್ನು ಕೆಲವು ಆರೋಪಿಗಳ ಬಂಧನಕ್ಕೆ ಕಾಲಾವಕಾಶ ನೀಡಿ ಎಂದು ಪೊಲೀಸರು ಪ್ರತಿಭಟನಕಾರರಿಗೆ ಮನವಿ ಮಾಡಿದ್ದರು. ಆದರೆ ಪುನೀತ್ ಕೆರೆಹಳ್ಳಿ ಬಂಧನ ಆಗಿಲ್ಲ, ಆತ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ ಎಂಬುದು ಇದರಿಂದ  ಸ್ಪಷ್ಟವಾಗಿದೆ.

ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನಲ್ಲಿ ಶುಕ್ರವಾರ ರಾತ್ರಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ವಾಹನದ ಚಾಲಕ ಇದ್ರೀಸ್ ಪಾಷಾ ಅವರನ್ನು ಥಳಿಸಿ ಹತ್ಯೆಗೈಯ್ಯಲಾಗಿತ್ತು.  ಪ್ರಕರಣದ ಎಫ್’ಐಆರ್ ನಲ್ಲಿ ಪುನೀತ್ ಕೆರೆಹಳ್ಳಿ ಪ್ರಮುಖ ಆರೋಪಿಯಾಗಿದ್ದಾನೆ. ಘಟನೆ ನಡೆದು ನಾಲ್ಕು ದಿನಗಳಾದರೂ ಆರೋಪಿಯನ್ನು ಬಂಧಿಸದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.

- Advertisement -

 ಪುನೀತ್ ಕೆರೆಹಳ್ಳಿ ಹರಿಯಬಿಟ್ಟಿರುವ ವೀಡಿಯೋದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್. ಡಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಬೆಳಕಿಗೆ ಬಂದಿದೆ.  

 ಪುನೀತ್’ನನ್ನು ಬಂಧಿಸಲಾಗಿದೆ ಎಂದೇ ಕಳೆದ ನಾಲ್ಕು ದಿನಗಳಿಂದ ಹೇಳಲಾಗಿತ್ತು. ಆದರೆ ವೈರಲ್ ವಿಡಿಯೋ ಪೊಲೀಸರ ನಡೆಯ ಬಗ್ಗೆ ಭಾರೀ ಸಂಶಯ ಮೂಡುವಂತೆ ಮಾಡಿದೆ.

Join Whatsapp