ಆದಿತ್ಯನಾಥ್ ವಿರುದ್ಧ ಫೇಸ್ಬುಕ್ ಪೋಸ್ಟ್: ಪಿಯುಸಿ ವಿದ್ಯಾರ್ಥಿ ಅರೆಸ್ಟ್

Prasthutha|

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಕುರಿತು ಆಕ್ಷೇಪಾರ್ಹ ಪೋಸ್ಟ್ ಹಂಚಿಕೆ ಮಾಡಿದ್ದಾನೆ ಎಂಬ ಆರೋಪದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

- Advertisement -

ರ್ಮೌಹಿಯಾ ಗ್ರಾಮದ ನಿವಾಸಿ ಆಶಿಷ್‌ ಯಾದವ್‌ (18) ಎಂಬ ವಿದ್ಯಾರ್ಥಿಯನ್ನು
ಆದಿತ್ಯನಾಥ್ ವಿರುದ್ಧ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ.

ಪೋಸ್ಟ್‌ ಕುರಿತು ಕೆಲವರು ಟ್ವಿಟರಿನಲ್ಲಿ ಡಿಜಿಪಿ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಬಂಧನ‌ ನಡೆಸಲಾಗಿದೆ ಎಂದು ತಾಲ್‌ಗ್ರಾಮ್‌ ಪೊಲೀಸ್‌ ಠಾಣೆಯ ಠಾಣಾಧಿಕಾರಿ ಹರಿಶ್ಯಾಮ್‌ ಸಿಂಗ್‌ ತಿಳಿಸಿದ್ದಾರೆ.

- Advertisement -

ಜಿಲ್ಲಾ ನ್ಯಾಯಾಧೀಶ ರಾಕೇಶ್‌ ಕುಮಾರ್‌ ಮಿಶ್ರಾ ಮತ್ತು ಎಸ್ಪಿ ರಾಜೇಶ್ ಕುಮಾರ್‌ ಶ್ರೀವಾಸ್ತವ್‌ ಅವರು ತಾಲ್‌ಗ್ರಾಮ್‌ ಠಾಣೆಗೆ ಭೇಟಿ ನೀಡಿ ವಿದ್ಯಾರ್ಥಿಯ ವಿಚಾರಣೆ ನಡೆಸಿದ್ದಾರೆ.



Join Whatsapp