ಲಾಕ್ ಡೌನ್ ವೇಳೆ ಕಾಲಿನಿಂದ ಒದ್ದ ಪಿಎಸ್ಐ ಸಸ್ಪೆಂಡ್!

Prasthutha|

ಬೆಂಗಳೂರು: ಕೊರೊನಾ ಲಾಕ್ ಡೌನ್ ಸಮಯದಲ್ಲಿ ಔಷಧ ಚೀಟಿ ಹಿಡಿದು ಬಂದ ಯುವಕನೊಬ್ಬನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಒದೆಯಲು ಮುಂದಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ -ಎಎಸ್ಐ ರಾಮಸ್ವಾಮಿ ಅವರನ್ನು ಅಮಾನತುಗೊಳಿಸಿ ಚಾಮರಾಜನಗರ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

- Advertisement -


ಕೊಳ್ಳೇಗಾಲದಲ್ಲಿ ಮೇ 23ರಂದು ಬೆಳಗ್ಗೆ ಯುವಕನ ಮೇಲೆ ಎಎಸ್ಐ ರಾಮಸ್ವಾಮಿ ಹಲ್ಲೆ ಮಾಡಿದ್ದರು.ಈ ವಿಡಿಯೋ ವೈರಲ್ ಆಗಿ, ಪೊಲೀಸ್ ಅಧಿಕಾರಿಯ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು.
ಈ ಸಂಬಂಧ ಡಿವೈಎಸ್ಪಿ ನಾಗರಾಜು ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜು.ಬಿ.ಮುಧೋಳ್ ಅವರು ಎಸ್ಪಿಗೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಎಸ್ಐ ಅವರನ್ನು ಚಾಮರಾಜನಗರ ಜಿಲ್ಲಾ ಎಸ್ಪಿ ದಿವ್ಯಸಾರಾಥಾಮಸ್ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.

Join Whatsapp