ಬೆಳ್ತಂಗಡಿ | “ಅನ್ಯಮತೀಯರ ವಾಹನಗಳಿಗೆ ಪ್ರವೇಶವಿಲ್ಲ” : ದೇವಸ್ಥಾನದ ಬಳಿ ವಿ ಹೆಚ್ ಪಿ ಬಜರಂಗದಳದಿಂದ ಪ್ರಚೋದನಕಾರಿ ಬ್ಯಾನರ್ !

Prasthutha|

ಮಂಗಳೂರು: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸೌತಡ್ಕ ಗ್ರಾಮದ ಮಹಾಗಣಪತಿ ದೇಗುಲಕ್ಕೆ ಹಿಂದೂಯೇತರರ ವಾಹನ ಪ್ರವೇಶ ನಿಷೇಧಿಸಲಾಗಿದೆ ಎಂದು ವಿಶ್ವ ಹಿಂದೂಪರಿಷತ್, ಬಜರಂಗದಳ ಪ್ರಚೋದನಕಾರಿಯಾಗಿ ಬ್ಯಾನರ್ ಅಳವಡಿಸಿದೆ.

- Advertisement -

ದೇವಸ್ಥಾನದ ಎದುರುಗಡೆ ಹೀಗೆ ಬರೆದ ಫಲಕವನ್ನು ವಿಶ್ವ ಹಿಂದೂಪರಿಷತ್, ಬಜರಂಗದಳ ಅಳವಡಿಸಿದ್ದು, ಸೌತಡ್ಕಕ್ಕೆ ಹಿಂದೂಯೇತರರ ಆಟೋ, ಟ್ಯಾಕ್ಸಿ ಮತ್ತು ವಾಹನ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ. ಅನ್ಯಕೋಮಿನವರು ಪ್ರವೇಶಿಸಿ ಭಕ್ತಾದಿಗಳನ್ನ ಲವ್ ಜಿಹಾದ್ ಹಾಗೂ ಇತರೆ ದುಷ್ಕೃತ್ಯ ಎಸಗಿರೋದು ಕಂಡು ಬಂದಿದೆ. ಹೀಗಾಗಿ ಹಿಂದುಗಳಲ್ಲದವರ ವಾಹನಗಳು ದೇವಸ್ಥಾನ ಪ್ರವೇಶ ಮಾಡದಂತೆ ನಿರ್ಬಂಧಿಸಲಾಗಿದೆ ಎಂದು ಕೂಡ ಬರೆಯಲಾಗಿದೆ.

ಸಂಘಪರಿವಾರದ ಕಾರ್ಯರ್ತರು ಮತ್ತೆ ಪ್ರಚೋದನಕಾರಿ ಬ್ಯಾನರ್ ಹಾಕುವ ಮೂಲಕ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ಕೇಳಿ ಬಂದಿದೆ.



Join Whatsapp