ಕೋಮು ದ್ವೇಷ ಹರಡಿದ ಪಬ್ಲಿಕ್ ಟಿವಿ ಕಚೇರಿ ಮುಂದೆ ಪ್ರತಿಭಟನೆ

Prasthutha|

►►ಟಿವಿ9, ಸುವರ್ಣ ಟಿವಿ ಕಚೇರಿಯೆಡೆಗೆ ತೆರಳುತ್ತಿದ್ದ ಪ್ರತಿಭಟನಕಾರರ ಬಂಧನ

- Advertisement -

ಬೆಂಗಳೂರು: ಕನ್ನಡದ ಸುದ್ದಿ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ಮರೆತು ಜನರನ್ನು ದಾರಿ ತಪ್ಪಿಸುತ್ತಿರುವ ಹಿನ್ನಲೆಯಲ್ಲಿ ಅವರ ಕರ್ತವ್ಯವನ್ನು ನೆನಪಿಸಲು ಬೆಂಗಳೂರಿನ ಸಮಾನ ಮನಸ್ಕರ ಗುಂಪು ಕನ್ನಡ ಸುದ್ದಿ ಮಾಧ್ಯಮಗಳ ಎದುರು ಪ್ರತಿಭಟನೆ ನಡೆಸಿದೆ.


ಸತ್ಯಾಗ್ರಹವು ಬೆಳಿಗ್ಗೆ 09:30ಕ್ಕೆ ಪಬ್ಲಿಕ್ ಟಿವಿ ಕಚೇರಿಯಿಂದ ಪ್ರಾರಂಭವಾಗಿ, ನಂತರ 11:30ಕ್ಕೆ ಸುವರ್ಣ ಟಿವಿ ಕಚೇರಿಯ ಮುಂದೆ ತಲುಪಿ, ಅದರ ನಂತರ ಮಧ್ಯಾಹ್ನ 2 ಗಂಟೆಗೆ ಬಿಟಿವಿ ಕಚೇರಿ ಬಳಿ ತೆರಳಿ, ಸಂಜೆ 4 ಗಂಟೆಗೆ ಟಿವಿ9 ಕಚೇರಿ ಮುಂದೆ ಸೇರಲಿತ್ತು. ಆದರೆ ಸತ್ಯಾಗ್ರಹಿಗಳು ಪಬ್ಲಿಕ್ ಟಿವಿ ಮುಂದೆ ತೆರಳಿ ಅಲ್ಲಿನ ಮಾಧ್ಯಮ ಸಿಬ್ಬಂದಿಗೆ ಆಗ್ರಹಗಳ ಮನವಿ ಪತ್ರ ಸಲ್ಲಿಸಿ ಸುವರ್ಣ ಟಿವಿ ಕಚೇರಿಗೆ ತೆರಳುತ್ತಿದ್ದಾಗ, ಹೈಗ್ರೌಂಡ್ ಪೊಲೀಸರು ಸತ್ಯಾಗ್ರಹಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Join Whatsapp