ಸ್ವಚ್ಛತಾ ರಾಯಭಾರಿಗಳಾದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಗಳಿಗೆ ಸೌಲಭ್ಯ ವಂಚನೆ: ಬಿಬಿಎಂಪಿ ವಿರುದ್ಧ ಬೃಹತ್ ಪ್ರತಿಭಟನೆ

Prasthutha|

ಬೆಂಗಳೂರು ; ದೇಶದ ನೈಜ ಸ್ವಚ್ಛತಾ ರಾಯಭಾರಿಗಳಾದ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಗಳಿಗೆ ನ್ಯಾಯ ಬದ್ಧವಾಗಿ ಸಲ್ಲಬೇಕಾದ ಸೌಲಭ್ಯಗಳನ್ನು ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳ ಧೋರಣೆ ವಿರುದ್ಧ ನಗರದ ಫ್ರೀಡಂ ಪಾರ್ಕ್ ನಲ್ಲಿಂದು ಸಫಾಯಿ ಕರ್ಮಚಾರಿಗಳ ಕ್ಷೇಮಾಭಿವೃದ್ದಿ ಸಂಘದ ಪ್ರತಿನಿಧಿಗಳು ಬೃಹತ್ ಪ್ರತಿಭಟನೆ ನಡೆಸಿದರು. 

- Advertisement -

ಬಿಬಿಎಂಪಿ ಅಧಿಕಾರಿಗಳ ಅತೀವ ನಿರ್ಲಕ್ಷ್ಯದಿಂದ ಶೋಷಿತ ಸಮುದಾಯ ತೊಂದರೆ ಎದುರಿಸುವಂತಾಗಿದೆ. ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಗಳಿಗೆ ಅನುದಾನ, ಗುರುತಿನ ಚೀಟಿ ಮತ್ತಿತರ ಸೌಲಭ್ಯ ಕಲ್ಲಿಸುವ ಬೇಡಿಕೆ ಈಡೇರಿಸುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಸೌಲಭ್ಯ ವಂಚಿತರ ಪಟ್ಟಿ ಕಳುಹಿಸದೇ ಬಿಬಿಎಂಪಿ ಅನ್ಯಾಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಜಿ.ಎನ್. ನಾಗೇಂದ್ರ ಮಾತನಾಡಿ, 2013 ರ ಕಾಯ್ದೆಯಂತೆ ಸುಪ್ರೀಂ ಕೋರ್ಟ್, ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯ ಹೈಕೋರ್ಟ್ ಸಹ ಬೆಂಗಳೂರಿನಲ್ಲಿರುವ ಮ್ಯಾನುವೆಲ್ ಸ್ಕ್ಯಾವಂಜರ್‌ಗಳಿಗೆ ಸೌಲಭ್ಯ ನೀಡಬೇಕೆಂದು ಸೂಚನೆ ನೀಡಿದೆ. ಇದಕ್ಕೆ ಬಿಬಿಎಂಪಿ ಕೂಡ ಒಪ್ಪಿಗೆ ಸೂಚಿಸಿದೆ. ಆದರೆ ಸೌಲಭ್ಯಕ್ಕಾಗಿ ಕಡತಗಳನ್ನು ದೆಹಲಿಯ ಎನ್.ಎಸ್.ಕೆ.ಡಿ.ಸಿ. ಕಚೇರಿಗೆ ಕಳುಹಿಸಿಲ್ಲ. ಹೀಗಾಗಿ ನಮ್ಮ  ಸಮುದಾಯಕ್ಕೆ ಸೌಲಭ್ಯ ಎನ್ನುವುದು ಮರಿಚಿಕೆಯಾಗಿದೆ. ಬಿಬಿಎಂಪಿ ಅಧಿಕಾರಿಗಳು ಕಡತ ಕಾಣೆಯಾಗಿದ್ದು, ಮತ್ತೊಮ್ಮೆ ಸಲ್ಲಿಸಿ ಎಂದು ಸಬೂಬುಗಳನ್ನು ಹೇಳಿ ನಮ್ಮ ವಿಚಾರದಲ್ಲಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂದರು.

- Advertisement -

ಪ್ರಧಾನಿ ನರೇಂದ್ರ ಮೋದಿ ಏಳು ವರ್ಷಗಳ ಹಿಂದೆ ಅಂದರೆ ಅಕ್ಟೋಬರ್ 2 ರಂದು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದು, ಇದೀಗ ಎರಡನೇ ಹಂತದ ಸ್ವಚ್ಛತಾ ಅಭಿಯಾನಕ್ಕೂ ಚಾಲನೆ ನೀಡಿದ್ದಾರೆ. ಆದರೆ ಹಲವಾರು ರಾಜ್ಯಗಳು, ನಗರಗಳು ಬಯಲು ಬಹಿರ್ದೆಸೆ ಮುಕ್ತವಾಗಿವೆ. ಈ ಯಶಸ್ಸಿನ ಅತಿದೊಡ್ಡ ರೂವಾರಿಗಳಾದ ನಮ್ಮ ಪಾತ್ರ ಇದೆ. ಆದರೆ ಬೆಂಗಳೂರಿನ ಮ್ಯಾನುವೆಲ್ ಸ್ಕ್ಯಾವಂಜರ್‌ಗಳ ಪರಿಸ್ಥಿತಿ ಮಾತ್ರ ಇನ್ನೂ ಶೋಚನೀಯವಾಗಿಯೇ ಇದೆ. ಬಿಬಿಎಂಪಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಶಯಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಸ್ವಚ್ಛ ಭಾರತದ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿ.ಎನ್. ನಾಗೇಂದ್ರ ಆರೋಪಿಸಿದ್ದರು.

ಕಳೆದ 2018-19 ರಲ್ಲಿ 1424 ಜನರಿಗೆ 40.000 ರೂ ಅನುದಾನ ಮತ್ತು ಗುರುತಿನ  ನೀಡುವ ಜತೆಗೆ ಇವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸುವಂತೆ ಬಿ.ಬಿ.ಎಂ.ಪಿ. ಆದೇಶ ಮಾಡಿದ್ದು. ಇದನ್ನು ಬಿ.ಬಿಎಂ.ಪಿ. ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಮತ್ತು ಬಿ.ಬಿ.ಎಂ.ಪಿ. ವೈಫಲ್ಯದಿಂದ ಬೆಂಗಳೂರಿನಲ್ಲಿ ಮ್ಯಾನುವೆಲ್ ಸ್ಕಾಂದಜರ್‌ಗಳಿಗೆ ತುಂಬಾ ಅನ್ಯಾಯ ನಡೆಯುತ್ತಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕುವುದು ಸೇರಿದಂತೆ ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಹೇಳಿದರು. ಪ್ರತಿಭಟನೆಯಲ್ಲಿ ಗಂಗಾಧರ್, ಸಂಧ್ಯಾ, ಸಿಂಹಾದ್ರಿ, ನಾರಾಯಣ ಸ್ವಾಮಿ, ಬಾಬುಲಾಲ್, ನಾಗೇಂದ್ರ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

Join Whatsapp