ಪತ್ರಕರ್ತ ವಿಶ್ವೇಶ್ವರ ಭಟ್ಟರಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಅವಮಾನ!

Prasthutha|

ಬೆಂಗಳೂರು: ‘ವಿಶ್ವವಾಣಿ’ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ತಮ್ಮ ಲೇಖನವೊಂದರಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪ ಕೇಳಿ ಬಂದಿದೆ.

- Advertisement -


ವಿಶ್ವವಾಣಿ ಪತ್ರಿಕೆಯ ತಮ್ಮದೇ ಅಂಕಣ ‘ನೂರೆಂಟು ವಿಶ್ವ’ದಲ್ಲಿ ಅಕ್ಟೋಬರ್ 6 ರಂದು ಬರೆದ ಲೇಖನವೊಂದರಲ್ಲಿ ‘ಮುರ್ಮು’ ಎಂಬ ಪದ ಬಳಸಿ ರಾಷ್ಟ್ರಪತಿಗಳ ಮೈಬಣ್ಣವನ್ನು ಹೀಯಾಳಿಸಿ ಅವಮಾನಕರವಾಗಿ ಬರೆದಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

- Advertisement -


ಲೇಖನದಲ್ಲಿ ಜೋರ್ಡಾನ್ ದೇಶದ ಬಗ್ಗೆ ಪರಿಚಯ ಮಾಡುವ ವಿಶ್ವೇಶ್ವರ ಭಟ್, ಸುಟ್ಟು ಕರಕಲಾದ ಕಾಗೆ. ಥೇಟು ಮುರ್ಮು ಅವತಾರ” ಎಂದು ಹೇಳಿ ದ್ರೌಪದಿ ಮುರ್ಮು ಅವರ ಮೈಬಣ್ಣವನ್ನು ಪರೋಕ್ಷವಾಗಿ ಗೇಲಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರೋಪಗಳು ಕೇಳಿ ಬಂದಿವೆ.

Join Whatsapp