ಹಿಂದೂ ಕಾರ್ಯಕರ್ತರನ್ನು ಮುಟ್ಟಿದರೆ ಮನೆ ಮನೆಗೆ ಬಂದು ನುಗ್ಗಿ ಹೊಡಿತೀವಿ: ಪ್ರಮೋದ್ ಮುತಾಲಿಕ್

Prasthutha|

ತುಮಕೂರು: ಹಿಂದೂ ಕಾರ್ಯಕರ್ತರನ್ನು ಮುಟ್ಟಿದರೆ ಮನೆ ಮನೆಗೆ ಬಂದು ನುಗ್ಗಿ ಹೊಡಿತೀವಿ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

- Advertisement -

ತುಮಕೂರಿನಲ್ಲಿ ಹಲ್ಲೆಗೊಳಗಾದ ಭಜರಂಗಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಹಲ್ಲೆಯ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಗೋರಕ್ಷಣೆ, ಲವ್ ಜಿಹಾದ್ ನಿಂದ ಹಿಂದೂ ಹುಡುಗಿಯರ ರಕ್ಷಣೆ, ಅಕ್ರಮ ಕಸಾಯಿಖಾನೆಗಳ ವಿರುದ್ಧ ಮಂಜು ಭಾರ್ಗವ್ ಧ್ವನಿ ಎತ್ತಿದ್ದರು. ಹಾಗಾಗಿ ಪೂರ್ವಯೋಜಿತವಾಗಿ ಅವನ ಮೇಲೆ ಅಟ್ಯಾಕ್ ಆಗಿದೆ.

ಈಗ ತುಮಕೂರಿನಲ್ಲಿ ಮಾತ್ರ ಬಂದ್ ಮಾಡಿ ಎಚ್ಚರಿಕೆ ನೀಡಿದ್ದೇವೆ. ಇಡೀ ರಾಜ್ಯದೊಳಗೆ ತುಮಕೂರು ಚಲೋ ಕರೆ ಕೊಟ್ಟರೆ ಐದಾರು ಲಕ್ಷ ಜನ ಬರುತ್ತೇವೆ. ಮನೆಯೊಳಗೆ ಹೊಕ್ಕು ಹೊಡಿತೀವಿ. ದಾದಾಗಿರಿ ಮಾಡುವಂತದ್ದು ಈ ದೇಶದಲ್ಲಿ ನಡೆಯಲ್ಲ. ಇನ್ಮೇಲೆ ಆಟ ನಡೆಯಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ರಾಜ್ಯದಲ್ಲಿರೋ ಎಲ್ಲಾ ಅಕ್ರಮ ಕಸಾಯಿಖಾನೆಗಳನ್ನು ನೀವು ನಿಲ್ಲಿಸ್ತಿರೋ ಅಥವಾ ನಾವು ನಿಲ್ಲಿಸಬೇಕೋ? ಎಂದು ಸರ್ಕಾರವನ್ನು ಪ್ರಶ್ನಿಸಿದರು.

Join Whatsapp