‘ಬಿಜೆಪಿಯು ದೀನ – ದಲಿತರ ಪರವಿದೆ’ – ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Prasthutha|

ಹುಬ್ಬಳ್ಳಿ: ಬಿಜೆಪಿಯು ಸದಾ ದೀನ ದಲಿತರ ಪರ ಕಾರ್ಯಾಚರಿಸುತ್ತದೆ. ಅವರ ಏಳಿಗೆಗಾಗಿ ಕಾರ್ಯೋನ್ಮುಖವಾಗಿರುತ್ತದೆ ಎಂದು ಬಿಜೆಪಿ ಮುಖಂಡ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಎಸ್ಸಿ ಹಾಗೂ ಎಸ್ಟಿ ಸಮುದಾಯಗಳಿಗೆ ರಾಜ್ಯ ಬಿಜೆಪಿ ಸರ್ಕಾರವು ಮೀಸಲಾತಿ ಹೆಚ್ಚಳ ಮಾಡಿರುವುದು, ಸರಕಾರ ದಲಿತರ ಪರ ಇದೆ ಎಂಬುವುದಕ್ಕೆ ಸಾಕ್ಷಿ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ʼಕಾಂಗ್ರೆಸ್ ಪಕ್ಷವು ದಲಿತರನ್ನು ಕೇವಲ ಮತ ಬ್ಯಾಂಕ್ಗಾಗಿ ಬಳಸಿಕೊಂಡಿದೆ. ಅವರ ಅಭಿವೃದ್ಧಿ ಬಗ್ಗೆ ಯೋಚಿಸಲೇ ಇಲ್ಲ. ಈ ಕಾರಣಕ್ಕೆ ದಲಿತರ ಸ್ಥಿತಿ ಇಂದಿಗೂ ಶೋಚನೀಯವಾಗಿದೆʼ ಎಂದು ಕಾಲೆಳೆದಿದ್ದಾರೆ.

Join Whatsapp