‘ಗೋದ್ರಾ ಗಲಭೆ’, ಕೇಂದ್ರದ ವೈಫಲ್ಯಗಳ ಫೈಲ್ ಯಾವಾಗ? | ‘ದಿ ಕಾಶ್ಮೀರ್ ಫೈಲ್ಸ್’ ಗೆ ನಟ ಪ್ರಕಾಶ್ ರೈ ಟಾಂಗ್

Prasthutha|

ಮುಂಬೈ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರೈ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ರೈ ಅವರು ಕೆಲವು ವಿಚಾರಗಳನ್ನು ಉಲ್ಲೇಖಿಸಿ “ಅವುಗಳ ಬಗ್ಗೆ ಫೈಲ್ಸ್ ಗಳು ಯಾವಾಗ ತೆರೆದುಕೊಳ್ಳುತ್ತವೆ?” ಎಂದು ಪ್ರಶ್ನಿಸಿದ್ದಾರೆ.

“ನಿರ್ಮಾಪಕರಾಗಿ ಬದಲಾದ ಪ್ರೀತಿಯ ನಟರೇ, ‘ಗೋದ್ರಾ ಫೈಲ್ಸ್’, ‘ದೆಹಲಿ ಫೈಲ್ಸ್’, ‘ಜಿಎಸ್‌ಟಿ ಫೈಲ್ಸ್’, ‘ನೋಟು ಅಮಾನ್ಯೀಕರಣದ ಫೈಲ್ಸ್’, ‘ಕೋವಿಡ್ ಫೈಲ್ಸ್’ ಹಾಗೂ ‘ಗಂಗಾ ಫೈಲ್ಸ್’ ಬಗ್ಗೆ ಯಾವಾಗ ಸಿನಿಮಾ ಮಾಡುತ್ತೀರಾ?” ಎಂದು ಪ್ರಕಾಶ್ ರೈ ಕೆಣಕಿದ್ದಾರೆ.

- Advertisement -

‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ ಕಾಶ್ಮೀರಿ ಪಂಡಿತರ ಹತ್ಯೆಯ ವಿಚಾರವನ್ನು ಮುಂದಿಟ್ಟುಕೊಂಡ ತೆರೆಗೆ ಬಂದ ಸಿನೆಮಾವು ಅರ್ಧ ಸತ್ಯವನ್ನೇ ತೋರಿಸಿದೆ ಎಂದು ಕೆಲವರು ಚಕಾರವೆತ್ತಿದ್ದಾರೆ.

ಪ್ರಕಾಶ್ ರೈ ಟ್ವೀಟ್ ಗೆ ಕೆಲವರು ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವು ರೈ ಟ್ವೀಟ್ ಸಮರ್ಥಿಸಿಕೊಂಡಿದ್ದಾರೆ.

Join Whatsapp