ಸೋಲುತ್ತಿರುವ ಚಿತ್ರ ನೋಡಲು ಕಂಗನಾ ಮನವಿಗೆ “ತಾಳ್ಮೆ ಇರಲಿ, ಸ್ವಾತಂತ್ರ್ಯ ಸಿಕ್ಕಿರೋದು 2014ರಲ್ಲಿ” ಎಂದು ಕಾಲೆಳೆದ ಪ್ರಕಾಶ್ ರಾಜ್!

Prasthutha|

ಬೆಂಗಳೂರು: ನಟಿ ಕಂಗನಾ ರನೌತ್ ಸಿನಿಮಾಗಳಿಗಿಂತಲೂ ಇತರ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಬಿಜೆಪಿ ಪರ ನಟಿ ಇಸ್ರೆಲ್- ಹಮಾಸ್ ವಿಷಯದಲ್ಲಿ ತಾನು ಇಸ್ರೇಲ್‌ಗೆ ಬೆಂಬಲ ನೀಡುವುದಾಗಿ ತಿಳಿಸಿ ರಾಯಭಾರಿಯನ್ನೂ ಭೇಟಿಯಾಗಿದ್ದರು. ಅಕ್ಟೋಬರ್ 27 ರಂದು ಅವರ ತೇಜಸ್ ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳಾಗಿದ್ದು, ಗಲ್ಲಾ ಪೆಟ್ಟಿಗೆ ಕಲೆಕ್ಷನ್ ತುಂಬಾ ವೀಕ್ ಆಗಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನ 1.25 ಕೋಟಿ ಕಲೆಕ್ಷನ್ ಮಾಡಿದರೆ, ಎರಡನೇ ದಿನವೂ ಅಷ್ಟೇ ಕಲೆಕ್ಷನ್ ಮಾಡಿ ಒಟ್ಟು 2.5 ಕೋಟಿ ರೂಪಾಯಿಯಷ್ಟೇ ಗಳಿಸಿದೆ. ಚಿತ್ರ ದಯನೀಯವಾಗಿ ಸೋಲುವ ಹಾದಿಯಲ್ಲಿದ್ದು ನಟಿ ಕಂಗಾಳಾಗಿದ್ದಾರೆ. ಚಿತ್ರವನ್ನು ದಯನೀಯ ಸೋಲಿನಿಂದ ಪಾರುಮಾಡಲು  ನಟಿ ಸಿನಿಮಾ ನೋಡಿ ಎಂದು ಎಕ್ಸ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಹಿಂದಿ ಚಲನಚಿತ್ರಗಳನ್ನು ನೋಡುವಂತೆ ಜನರನ್ನು ವೀಡಿಯೋ ಮೂಲಕ ಒತ್ತಾಯಿಸಿದ್ದಾರೆ. COVID ನಂತರ ಥಿಯೇಟರ್‌ಗಳಲ್ಲಿ ಜನ ಕಡಿಮೆಯಾಗುತ್ತಿದ್ದಾರೆ ಎಂದಿದ್ದಾರೆ.

- Advertisement -

ಕಂಗನಾ ರನೌತ್ ಅವರ  ಮನವಿಗೆ ನಟ  ಪ್ರಕಾಶ್ ರಾಜ್  ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ಭಾರತಕ್ಕೆ ಇತ್ತೀಚೆಗಷ್ಟೇ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿದೆ.. ದಯವಿಟ್ಟು ನಿರೀಕ್ಷಿಸಿ .. ಅದು ಪಿಕಪ್ ಆಗುತ್ತದೆ” ಎಂದು ಪ್ರಕಾಶ್ ರಾಜ್ ಕಾಲೆಳೆದಿದ್ದು, ಜಸ್ಟ್ ಆಸ್ಕಿಂಗ್ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.

Join Whatsapp