ಪ್ರಜ್ವಲ್‍ ಗೆ ಟಿಕೆಟ್ ಕೊಡಬೇಡಿ ಅಂತಾ ಮೊದಲೇ ಹೇಳಿದ್ದೆ: ದೇವರಾಜೇ ಗೌಡ ಸ್ಫೋಟಕ ಹೇಳಿಕೆ

Prasthutha|

- Advertisement -

ಬೆಂಗಳೂರು: ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡಬೇಡಿ ಅಂತ ಮೊದಲೇ ಹೇಳಿದ್ದೆ. ಅವರಿಂದ ಹೆಣ್ಣು ಮಕ್ಕಳ ಶೋಷಣೆ ಆಗಿದೆ. ಅದನ್ನು ನೋಡಿದ್ದೀನಿ. ಮುಂದೊಂದು ದಿನ ಸಮಸ್ಯೆಯಲ್ಲಿ ಸಿಲುಕಿ ಮುಜುಗರಕ್ಕೆ ಸಿಲುಕುತ್ತೇವೆ ಎಂದಿದ್ದೆ ಎಂದು ಬಿಜೆಪಿ ಮುಖಂಡ ಮತ್ತು ವಕೀಲ ದೇವರಾಜೇ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಡಿ ಅಂತ ಪತ್ರ ಬರೆದಿದ್ದೆ. ನಮ್ಮ ನಾಯಕರು ಅದನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಅವರ ಗಮನಕ್ಕೆ ತರಲು ಸಾಕಷ್ಟು ಪ್ರಯತ್ನಗಳನ್ನು ನಾನು ಮಾಡಿದ್ದೇನೆ. ಇ-ಮೇಲ್ ಮೂಲಕ ಅವರಿಗೆ ಮಾಹಿತಿ ನೀಡಲು ಪ್ರಯತ್ನವನ್ನು ಮಾಡಿದ್ದೀನಿ ಎಂದರು.

Join Whatsapp