ಹೊಂಡಮಯವಾದ ಹೆದ್ದಾರಿ; ಸಂಕಷ್ಟದಲ್ಲಿ ವಾಹನ ಸವಾರರು

Prasthutha|

ಆಲ್ದೂರು: ಚಿಕ್ಕಮಗಳೂರು- ಶೃಂಗೇರಿ, ಹೊರನಾಡು, ಕೊಪ್ಪ, ರಂಭಾಪುರಿ ಪೀಠ, ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ತುಡುಕೂರು – ತೋರಣ ಮಾವು ಗ್ರಾಮದ ನಡುವೆ ಹಾದುಹೋಗುವ ರಾಜ್ಯ ಹೆದ್ದಾರಿ ಹೊಂಡಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

- Advertisement -


ಈ ರಸ್ತೆಯಲ್ಲಿ ನಿತ್ಯ ನೂರಾರು ಪ್ರವಾಸಿಗರು ಸಂಚರಿಸುತ್ತಿದ್ದು, ಹೆಜ್ಜೆಗೊಂದರಂತೆ ಗುಂಡಿಗಳಿವೆ. ಇದೇ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತಕ್ಕೀಡಾಗಿತ್ತು.
‘ಲೋಕೋಪಯೋಗಿ ಇಲಾಖೆ, ರಸ್ತೆ ಪ್ರಾಧಿಕಾರ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ತಕ್ಷಣ ಮುಂದಾಗಬೇಕು’ ಎಂದು ಸ್ಥಳೀಯ ಪ್ರಮುಖರು ಒತ್ತಾಯಿಸಿದ್ದಾರೆ.



Join Whatsapp