ಚೆನ್ನೈ: ಟೆಕ್ಕಿಯ ಜೀವ ತೆಗೆದ ‘ಮರಣಗುಂಡಿ’…!

Prasthutha|

ತಮಿಳುನಾಡು: ರಸ್ತೆಗುಂಡಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರನ ಮೇಲೆ ಬಸ್ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಚೆನ್ನೈ ನಗರದಲ್ಲಿ ನಡೆದಿದೆ.

- Advertisement -

ಚೆನ್ನೈನ ಸೈದಾಪೇಟೆಯ ಅಣ್ಣಾಸಾಲೈನಲ್ಲಿ ಸೋಮವಾರ 8.44ರ ಸಮಯದಲ್ಲಿ ಘಟನೆ ನಡೆದಿದ್ದು, ಕಛೇರಿಗೆ ತೆರಳುತ್ತಿದ್ದ ಮುಹಮ್ಮದ್ ಯೂನುಸ್ (32) ಮುಖ್ಯ ರಸ್ತೆಯಲ್ಲಿನ ಗುಂಡಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಬಿದ್ದಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ನಗರ ಸಾರಿಗೆ ಬಸ್’ನ ಹಿಂಬಂದಿ ಚಕ್ರವು ಕ್ಷಣಮಾತ್ರದಲ್ಲಿ ಯೂನುಸ್ ಜೀವವನ್ನೇ ತೆಗೆದಿದೆ. ಹೆಲ್ಮೆಟ್ ಧರಿಸಿದ್ದರೂ ಟೆಕ್ಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಭೀಕರ ದೃಶ್ಯವು ಸೆರೆಯಾಗಿದ್ದು, ಮನಕಲಕುವಂತಿದೆ. ನಗರ ಸಾರಿಗೆಯ ಬಸ್ ಚಾಲಕ ತೇವರಾಜನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಐಪಿಸಿ ಹಾಗೂ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಗಾಗಿ ಕೇಸು ದಾಖಲಿಸಲಾಗಿದೆ. ನಂಗನಲ್ಲೂರ್ ನಿವಾಸಿಯಾಗಿದ್ದ ಯೂನುಸ್, ಖಾಸಗಿ ಸಾಫ್ಟ್’ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಯೂನುಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರೋಯಾಪೆಟ್ಟ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.



Join Whatsapp