ಮುಸ್ಲಿಂ ಸಹ ವಿದ್ಯಾರ್ಥಿಗೆ ಕಿರುಕುಳ: ಸ್ನಾತಕೋತ್ತರ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ವಿಶ್ವವಿದ್ಯಾಲಯ

Prasthutha|

ಹೊಸದಿಲ್ಲಿ:  ಮುಸ್ಲಿಮನಾದ  ಸಹ ವಿದ್ಯಾರ್ಥಿಯೊಬ್ಬನಿಗೆ ನಿಂದನಾತ್ಮಕ ಬೈಗುಳ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ಅಮಾನತುಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಅಮಾನತುಗೊಂಡ ವಿದ್ಯಾರ್ಥಿಯನ್ನು ಎಂಎ  ಸ್ನಾತಕೋತ್ತರ ವಿಭಾಗದ ರಿಷಿ ತಿವಾರಿ ಎಂದು ಗುರುತಿಸಲಾಗಿದೆ. ಮುಸ್ಲಿಂ ವಿದ್ಯಾರ್ಥಿಯೊಬ್ಬ ದ್ವೇಷದ ಅಪರಾಧದ ಬಗ್ಗೆ ದೂರು ನೀಡಿದ ನಂತರ, ವಿದ್ಯಾರ್ಥಿಗಳ ಗುಂಪು ಶಿಕ್ಷೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಳಿಕ ರಿಷಿ ತಿವಾರಿಯನ್ನು ಅಮಾನತುಗೊಳಿಸಲಾಗಿದೆ.

ಮೇ 1 ರಂದು ಈ ಘಟನೆ ನಡೆದಿದ್ದು,  ಮುಸ್ಲಿಂ ವಿದ್ಯಾರ್ಥಿ ಕೆಜಿಎ ಹಾಸ್ಟೆಲ್ ಬಳಿ ಉಪವಾಸ ಮುರಿಯಲು ಬಂದಿದ್ದ ವೇಳೆ  ರಿಷಿ ತಿವಾರಿ ಆತನನ್ನು ನಿಂದಿಸಿ, ಆಹಾರವನ್ನು ಎಸೆದು, ಮುಖಕ್ಕೆ ಉಗುಳಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

ರಿಷಿ ತಿವಾರಿಯು  ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು  ಪ್ರತಿಭಟನಾ ನಿರತ   ವಿದ್ಯಾರ್ಥಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Join Whatsapp