ಸಿಎಂ ಆದಿತ್ಯನಾಥ್ ವಿರುದ್ಧ ಪೋಸ್ಟ್: ವಿದ್ಯಾರ್ಥಿಯ ಬಂಧನ

Prasthutha|

ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಫೇಸ್ ಬುಕ್ ನಲ್ಲಿ ಆಕ್ಷೇಪಾರ್ಹ ಬರಹ ಪೋಸ್ಟ್ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.

- Advertisement -

ಮೌರ್ ಹಿಯಾ ಗ್ರಾಮದ ನಿವಾಸಿ ಆಶಿಷ್ ಯಾದವ್ (18) ಬಂಧಿತ ವಿದ್ಯಾರ್ಥಿ. ಈತ ಸಿಎಂ ವಿರುದ್ಧ ಹಾಕಿದ್ದ ಪೋಸ್ಟ್ ಕುರಿತು ರಾಜ್ಯದ ಡಿಜಿಪಿಗೆ ಕೆಲವರು ದೂರು ನೀಡಿದ್ದರು. ದೂರು ನೀಡಿದ ಬೆನ್ನಲ್ಲೇ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ತಾಲ್ ಗ್ರಾಮ್ ಪೊಲೀಸ್ ಠಾಣಾಧಿಕಾರಿ ಹರಿಶ್ಯಾಮ್ ಸಿಂಗ್ ತಿಳಿಸಿದ್ದಾರೆ.

Join Whatsapp