ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯ ವತಿಯಿಂದ ಜನಾರೋಗ್ಯವೇ ರಾಷ್ಟ್ರ ಶಕ್ತಿ ಅಭಿಯಾನ

Prasthutha|

ಫರಂಗಿಪೇಟೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜನಾರೋಗ್ಯವೇ ರಾಷ್ಟ್ರ ಶಕ್ತಿ ಎಂಬ ರಾಷ್ಟ್ರೀಯ ಅಭಿಯಾನದ ಅಂಗವಾಗಿ ಫರಂಗಿಪೇಟೆ ವಲಯ ವತಿಯಿಂದ ರವಿವಾರ ಮ್ಯಾರಥಾನ್, ಯೋಗ ಪ್ರಾತ್ಯಕ್ಷಿಕೆ, ತಾಲೀಮ್ ಮತ್ತು ಸಭಾಕಾರ್ಯಕ್ರಮ ನಡೆಯಿತು.

- Advertisement -

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯ ಅಧ್ಯಕ್ಷ ನಝೀರ್ ಕುಂಜತ್ಕಳ ವಹಿಸಿದರು.
ಮುಖ್ಯ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯ ಇಮ್ತಿಯಾಝ್ ತುಂಬೆ ಶಾರೀರಿಕ ಮಾನಸಿಕವಾದ ಆರೋಗ್ಯದ ಕಾಳಜಿಯೊಂದಿಗೆ ಆರೋಗ್ಯಕರವಾದ ಸಮಾಜವನ್ನು ನಿರ್ಮಿಸಲು ಪ್ರಯತ್ನ ಪಟ್ಟಾಗ ಮಾತ್ರ ಸಧ್ರಡ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಫರಂಗಿಪೇಟೆ ವೈದ್ಯ ಪ್ರಭಾಕರ್ ಮತ್ತು ಪಾಪ್ಯುಲರ್ ಫ್ರಂಟ್ ಬಂಟ್ವಾಳ ತಾಲೂಕು ಅಧ್ಯಕ್ಷ ಸೆಲೀಮ್ ಕೆ ಆರೋಗ್ಯದ ಬಗ್ಗೆ ಈ ಸಂದರ್ಭದಲ್ಲಿ ಮಾತನಾಡಿದರು.

ಎಸ್ಡಿಪಿಐ ಉತ್ತರ ಕ್ಷೇತ್ರ ಅಧ್ಯಕ್ಷ ಯಾಸಿನ್ ಅರ್ಕುಳ, ಸಂಗಬೆಟ್ಟು ಬ್ಲಾಕ್ ಅಧ್ಯಕ್ಷ ಸುಲೈಮಾನ್ ಉಸ್ತಾದ್, ಪುದು ಗ್ರಾಮ ಸಮಿತಿ ಅಧ್ಯಕ್ಷ ಇಕ್ಬಾಲ್ ಅಮೆಮಾರ್, ತುಂಬೆ ಗ್ರಾಮ ಸಮಿತಿ ಅಧ್ಯಕ್ಷ ಅಝೀಝ್ ತುಂಬೆ ಉಪಸ್ಥಿತರಿದ್ದರು
ರಮೀಝ್ ಅರ್ಕುಳ ಸ್ವಾಗತಿಸಿದರು.

Join Whatsapp