ಹಾಜಿ ಎಂ.ಮೊಹಿದ್ದೀನ್ ಕುಂಞಿ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಸಂತಾಪ

Prasthutha|

ಮಂಗಳೂರು: ಅಲ್ ಫುರ್ಖಾನ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಮತ್ತು ಚೆಯರ್ ಮೆನ್ ಆಗಿದ್ದ ಹಾಜಿ ಎಂ.ಮೊಹಿದ್ದೀನ್ ಕುಂಞಿಯವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಮತ್ತು ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಅವರು ಜಂಟಿ ಹೇಳಿಕೆಯಲ್ಲಿ ಸಂತಾಪವನ್ನು ಸೂಚಿಸಿದ್ದಾರೆ.

- Advertisement -

ಧಾರ್ಮಿಕ ಮತ್ತು ಸಾಮಾಜಿಕ ಮುಂದಾಳುವಾಗಿದ್ದ ಇವರು, ಪರೋಪಕಾರಿಯೂ ಆಗಿದ್ದರು. 17 ವರುಷಗಳ ಹಿಂದೆ ಸ್ಥಾಪಿಸಿದ ಧಾರ್ಮಿಕ, ಲೌಕಿಕದ ಸಮನ್ವಯ ಶಿಕ್ಷಣ ಹೊಂದಿರುವ ಅವರ ಕನಸಿನ ಕ್ಯಾಂಪಸ್ ನಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೈದಿದ್ದಾರೆ. ಮೀನುಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಓರ್ವ ಯಶಸ್ವಿ ಉದ್ಯಮಿಯೂ ಆಗಿದ್ದರು. ಕೊಡುಗೈ ದಾನಿಯಾಗಿದ್ದ ಅವರು ಅನೇಕ ಮಸೀದಿ, ಮದ್ರಸಗಳ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸಮುದಾಯದ ಸಬಲೀಕರಣದ ಪರಿಕಲ್ಪನೆಯನ್ನು ಹೊಂದಿದ್ದ ಮೊಹಿದ್ದೀನ್ ಕುಂಞಿಯವರು, ಆ ನಿಟ್ಟಿನಲ್ಲಿ ಹಲವಾರು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮಾನವೀಯ ಕಳಕಳಿ ಹೊಂದಿದ್ದ ಇವರ ಸೇವೆಗಳು ಎಂದಿಗೂ ಸ್ಮರಣಾರ್ಹವಾಗಿರಲಿವೆ ಎಂದು ಅವರು ತಿಳಿಸಿದ್ದಾರೆ.

Join Whatsapp