ದೆಹಲಿ ಹೈಕೋರ್ಟ್ ಸಂಕೀರ್ಣದಲ್ಲಿ ಗುಂಡು ಹಾರಿಸಿಕೊಂಡು ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ!

Prasthutha|

ಹೊಸದಿಲ್ಲಿ: ದೆಹಲಿ ಹೈಕೋರ್ಟ್ ಸಂಕೀರ್ಣದಲ್ಲಿ ಪೊಲೀಸ್ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -

ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿಯನ್ನು ಅಲ್ವಾರ್ ಮೂಲದ ಕಾನ್ಸ್ಟೇಬಲ್ ಟಿಂಕು ರಾಮ್ (30) ಎಂದು ಗುರುತಿಸಲಾಗಿದೆ. ಹೈಕೋರ್ಟ್ ನ ಗೇಟ್ ನಂ.3 ರ ಮುಂದೆ ಮೃತದೇಹ ಪತ್ತೆಯಾಗಿದೆ.

ತಮ್ಮ ಸೇವಾ ರಿವಾಲ್ವರ್ ನಿಂದ ಗುಂಡು ಹಾರಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೊಸದಿಲ್ಲಿ ಜಿಲ್ಲಾ ಡೆಪ್ಯುಟಿ ಕಮೀಷನರ್ ದೀಪಕ್ ಯಾದವ್ ತಿಳಿಸಿದ್ದಾರೆ. ಕಾನ್ಸ್ಟೇಬಲ್ ಅನ್ನು ಹೈಕೋರ್ಟ್ ನ ಗೇಟ್ ನಂ.3 ರಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯ ವೇಳೆ ಸ್ವಯಂ ಗುಂಡು ಹಾರಿಸಿಕೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಕಾನ್ ಸ್ಟೇಬಲ್ ರಾಮ್ ರಾಜಸ್ಥಾನದ ಸಶಸ್ತ್ರ ಕಾನ್ ಸ್ಟೇಬಲ್ ಗಳ 8ನೇ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Join Whatsapp