ಪ್ರಧಾನಿ ಮೋದಿ ಮೌನ ದುರ್ಬಲ ನಾಯಕನ ಲಕ್ಷಣ: ಕೇಜ್ರಿವಾಲ್ ಆಕ್ರೋಶ

Prasthutha|

ಹೊಸದಿಲ್ಲಿ: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ರಾಷ್ಟ್ರದ ಆತ್ಮಸಾಕ್ಷಿಯನ್ನು ಅಲ್ಲಾಡಿಸಿದೆ ಮತ್ತು ರಾಜ್ಯದಲ್ಲಿ ಶಾಂತಿ ಮರುಸ್ಥಾಪಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಒತ್ತಾಯಿಸಿದ್ದಾರೆ.

- Advertisement -

ಇಂತಹ ಘಟನೆಗಳ ಬಗ್ಗೆ ಪ್ರಧಾನಿ ಮೋದಿ ಮೌನವಾಗಿರುವುದು ಆಗಾಗ ಕಂಡು ಬರುತ್ತಿದೆ. ಇದು ದುರ್ಬಲ ನಾಯಕನ ಸಂಕೇತವಾಗಿದೆ. ಒಬ್ಬ ಧೈರ್ಯಶಾಲಿ ನಾಯಕ ಮುಂದೆ ಬರುತ್ತಾನೆ. ಅವರು ಕೋಣೆಯಲ್ಲಿ ಅವಿತುಕೊಳ್ಳುವುದಿಲ್ಲ” ಎಂದು ಎಎಪಿ ಮುಖ್ಯಸ್ಥ ಕಿಡಿ ಕಾರಿದ್ದಾರೆ.

ಮೇ 4 ರಂದು ಮಣಿಪುರದ ಇಬ್ಬರು ಆದಿವಾಸಿ ಮಹಿಳೆಯರನ್ನು ದುಷ್ಕರ್ಮಿಗಳ ಗುಂಪು ಬೆತ್ತಲೆಯಾಗಿ ಮೆರವಣಿಗೆ ಮಾಡುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Join Whatsapp