ಆಂಬ್ಯುಲೆನ್ಸ್ -ಬಸ್ ಡಿಕ್ಕಿ: ರೋಗಿ ಸಾವು

Prasthutha|

ಕಾಸರಗೋಡು: ಆಂಬ್ಯುಲೆನ್ಸ್ ಮತ್ತು ಬಸ್ ಡಿಕ್ಕಿ ಹೊಡೆದ ಪರಿಣಾಮ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಮೃತಪಟ್ಟಿರುವ ಘಟನೆ ಕಾಸರಗೋಡು ಜಿಲ್ಲೆಯ ಪುದಿಯಕೋಟ್ಟ ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ.

- Advertisement -

ಕುಂಬಳೆ ಸೀತಾಂಗೋಳಿ ಸಮೀಪದ ಪೆರ್ಮುದೆ ನಿವಾಸಿ ಸಾಯಿಬಾಬಾ  ಮೃತ ದುರ್ದೈವಿ. ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಉಪ್ಪಳದಿಂದ ಪರಿಯಾರಂ ಮೆಡಿಕಲ್  ಕಾಲೇಜಿಗೆ ಕೊಂಡುಹೋಗುತ್ತಿರುವ ವೇಳೆ ಪುದಿಯಕೋಟ್ಟ ಎಂಬಲ್ಲಿ ಅಪಘಾತ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.



Join Whatsapp