ಪಡುಬಿದ್ರಿ: ಡಿಕ್ಕಿ ಹೊಡೆದ ಕಾರನ್ನೇ ಎಳೆದೊಯ್ದ ಟಿಪ್ಪರ್

Prasthutha|

ಪಡುಬಿದ್ರಿ: ಟಿಪ್ಪರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದ ಸ್ಯಾಂಟ್ರೋ ಕಾರನ್ನು ಟಿಪ್ಪರ್ ಚಾಲಕ ಗಮನಿಸದೆ ಹೆಜಮಾಡಿಯ ಟೋಲ್ ಗೇಟ್ ವರೆಗೂ ಎಳೆದುಕೊಂಡು ಹೋಗಿರುವ ಘಟನೆ ಕನ್ನಂಗಾರ್ ಬೈಪಾಸ್ ಬಳಿ ನಡೆದಿದೆ.

- Advertisement -

ಟಿಪ್ಪರ್ ಗೆ ಕಾರು ಸಿಲುಕಿರುವುದನ್ನು ಗಮನಿಸದ ಚಾಲಕ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬೇರೆ ಕಾರಿನವರು ಹೇಳಿದ ಬಳಿಕ ಹೆಜಮಾಡಿಯಲ್ಲಿ ನಿಲ್ಲಿಸಿದ್ದಾನೆ.

ಉಡುಪಿ ಕಡೆಯಿಂದ ಸಾಗುತ್ತಿದ್ದ ಕಾರು ಟಿಪ್ಪರ್ ಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಟಿಪ್ಪರ್ ನ ಹಿಂಭಾಗದಲ್ಲಿ ಸಿಲುಕಿಕೊಂಡಿದೆ. ಹಿಂಬದಿಯಿಂದ ಬಂದ ಕಾರು ಚಾಲಕರೋರ್ವರು ಹೇಳಿದ ಬಳಿಕ ಟಿಪ್ಪರ್ ಚಾಲಕ ಹೆಜಮಾಡಿ ಟೋಲ್ ಗೇಟ್ ಬಳಿ ನಿಲ್ಲಿಸಿದ್ದಾನೆ.

- Advertisement -

ಪಡುಬಿದ್ರಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಾರಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಗಾಯಗೊಂಡ ಸಾಗರ ಮೂಲದ ಜಾಫರ್ ಖಾನ್, ಶಾಹಿನ, ಯಾಸಿರ್ ಖಾನ್ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Join Whatsapp