ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನ ಮೇಲೆ ಗುಂಡು ಹಾರಿಸಿದ ಮಾಲೀಕ

Prasthutha|

ಬೆಂಗಳೂರು: ಕಳ್ಳತನ ಮಾಡಲು ಬಂದಿದ್ದ ಕಳ್ಳನ ಮೇಲೆ ಮನೆ ಮಾಲೀಕರೊಬ್ಬರು ಗುಂಡು ಹಾರಿಸಿದ ಘಟನೆ  ಸಂಪಿಗೇಹಳ್ಳಿಯ ರಾಚೇನಹಳ್ಳಿಯಲ್ಲಿ ನಡೆದಿದೆ.

- Advertisement -

ಗುಂಡು ತಗುಲಿ ಕಾಲಿಗೆ ಗಾಯಗೊಂಡಿರುವ  ಕಳ್ಳ ಲಕ್ಷ್ಮಣ್ ಎಂಬಾತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿರುವ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಳ್ಳ ಲಕ್ಷ್ಮಣ್’ನ  ಕಾಲಿಗೆ ಮಾಲೀಕ ವೆಂಕಟೇಶ್ ಎಂಬುವರು ಗುಂಡು ಹಾರಿಸಿದ್ದಾರೆ.

- Advertisement -

ಇಂದು ಬೆಳಗಿನ ಜಾವ 2.30ರ ಸುಮಾರಿಗೆ ವೆಂಕಟೇಶ್ ಅವರ ಮನೆಗೆ ಕಳ್ಳ ಲಕ್ಷ್ಮಣ್ ನುಗ್ಗಿದ್ದಾನೆ. ಆತನನ್ನು ನೋಡಿದ ನಾಯಿಗಳು ಜೋರಾಗಿ ಬೊಗಳ ತೊಡಗಿದ್ದು ಶಬ್ದ  ಕೇಳಿ ಎಚ್ಚೆತ್ತ ವೆಂಕಟೇಶ್ ತನ್ನ ಬಳಿಯಿದ್ದ ಪರವಾನಿಗೆ ಇರುವ ಡಬ್ಬಲ್ ಬ್ಯಾರಲ್ ಗನ್ ತೆಗೆದುಕೊಂಡು ಹೊರಬಂದಿದ್ದಾರೆ.

ವೆಂಕಟೇಶ್ ಅವರನ್ನು ನೋಡಿದ ಲಕ್ಷ್ಮಣ್ ಪರಾರಿಯಾಗಲು ಯತ್ನಿದಾಗ ವೆಂಕಟೇಶ್ ಗುಂಡು ಹಾರಿಸಿದ್ದಾರೆ. ಸುದ್ದಿ ತಿಳಿದ ತಕ್ಷಣವೇ ಸಂಪಿಗೇಹಳ್ಳಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಮನೆ ಮಾಲೀಕ ವೆಂಕಟೇಶ್ ವಿವರ ನೀಡಿ, ರಾತ್ರಿ 2.30ಕ್ಕೆ ಮನೆಯಲ್ಲಿ ನಾಯಿಗಳು ಜೋರಾಗಿ ಬೋಗಳಲು ಶುರುಮಾಡಿದ್ದವು. ಈ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಸಿಸಿಟಿವಿ ಮಾನಿಟರ್ ನೋಡಿದ ವೇಳೆ ಕಳ್ಳನೊಬ್ಬ ಒಳಗೆ ಬರುತ್ತಿರುವುದು ಗೊತ್ತಾಗಿತ್ತು. ತಕ್ಷಣ ಮನೆಯಲ್ಲಿದ್ದ ಡಬ್ಬಲ್ ಬ್ಯಾರಲ್ ಗನ್ ಹಿಡಿದು ಹೊರ ಬಂದಿದ್ದೆ. ಆತ ಗ್ಯಾಸ್ ಕಟರ್ ಹಿಡಿದು ಮನೆಯ ಗೇಟ್ ಒಳಗೆ ಬಂದಿದ್ದ. ಆಗ ನಾನು ಮೊದಲ ಮಹಡಿಯಿಂದಲೇ ಆತನ ಕಡೆ ಗುಂಡು ಹಾರಿಸಿದೆ. ಇನ್ನೂ ತುಂಬಾ ಜನ ಕಳ್ಳರು ಒಟ್ಟಿಗೆ ಬಂದಿದ್ದಾರೆ ಎಂದು ಭಯದಿಂದ ಗುಂಡು ಹಾರಿಸಿದೆ, ಐವತ್ತು ವರ್ಷದಿಂದ ಇದೇ ಜಾಗದಲ್ಲಿ ವಾಸವಾಗಿದ್ದೇನೆ. ಇದೇ ಮೊದಲ ಬಾರಿಗೆ ಈ ರೀತಿ ಆಗಿದೆ ಎಂದು ಹೇಳಿದರು.

Join Whatsapp