ನಾನು ಉತ್ತರಪ್ರದೇಶದಲ್ಲಿ ದಬ್ಬಾಳಿಕೆಗೆ ಒಳಗಾದವರ ತಂದೆ | ರೈತ ನಾಯಕ ಟಿಕಾಯತ್ ಗೆ ಉವೈಸಿ ತಿರುಗೇಟು

Prasthutha|

ಸಂಭಾಲ್: ಉವೈಸಿ ಬಿಜೆಪಿಯ ಚಾಚಾ ಜಾನ್ ಎಂದು ಆರೋಪಿಸಿದ್ದ ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಸಂಸದ ಅಸದುದ್ದಿನ್ ಉವೈಸಿ ಕಿಡಿಕಾರಿದ್ದಾರೆ. ಅಲ್ಲದೇ ಟಿಕಾಯತ್ ಹೇಳಿಕೆಗೆ ತಾನು ಚಾಚಾ ಜಾನ್ ಅನ್ನುವುದಕ್ಕಿಂತ ನಾನೊಬ್ಬ ದುರ್ಬಲ ವರ್ಗದ ತಂದೆ ಎಂದು ಹೇಳಿಕೊಂಡಿದ್ದಾರೆ. ನಾನು ದುರ್ಬಲರು, ಬಡವರ್ಗದವರ ಮತ್ತು ಉತ್ತರ ಪ್ರದೇಶದಲ್ಲಿ ದಬ್ಬಾಳಿಕೆಗೆ ಒಳಗಾದವರ ತಂದೆ ಎಂದು ಕರೆದುಕೊಂಡಿದ್ದಾರೆ.

- Advertisement -

ಇತ್ತೀಚೆಗಷ್ಟೆ ಸಂಸದ ಉವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಕೇಶ್ ಟಿಕಾಯತ್ ಉವೈಸಿ ಮತ್ತು ಬಿಜೆಪಿ ಒಂದೇ ತಂಡ, ರೈತರಾದ ನಾವು ಅವರ ನಡೆಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದರು, ಅಲ್ಲದೇ ಉವೈಸಿ ಬಿಜೆಪಿ ವಿರುದ್ಧ ಮಾತನಾಡಿದರೆ ಒಂದು ಪ್ರಕರಣಗಳೂ ದಾಖಲಾಗುವುದಿಲ್ಲ, ಉವೈಸಿಗೆ ಎರಡು ಮುಖವಿದೆ, ರೈತರು ಅವರಿಂದ ಸರ್ವನಾಶವಾಗುತ್ತಾರೆ ಎಂದಿದ್ದರು. ಮತ್ತು ಅಸದುದ್ದಿನ್ ಉವೈಸಿ ಚಾಚಾ ಜಾನ್ ಎಂದು ಆರೋಪಿಸಿದ್ದರು.

Join Whatsapp