ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಕುರಿತು ಬೊಮ್ಮಾಯಿಗೆ ಬಹಿರಂಗ ಪತ್ರ: ಭೇಟಿ ನಿರಾಕರಣೆಯಿಂದಾಗಿ ಪತ್ರ ಬರೆಯಬೇಕಾಯ್ತು ಎಂದ 76 ಗಣ್ಯರು

Prasthutha|

ಬೆಂಗಳೂರು: ಕರ್ನಾಟಕದಲ್ಲಿ ಮುಸ್ಲಿಂ, ಕ್ರೈಸ್ತ ಮತ್ತು ದಲಿತ ಸಮುದಾಯದ ಮೇಲೆ ನಿರಂತರವಾಗಿ ನಡೆಯುತ್ತಿರುವ ಆಘಾತಕಾರಿ ಹಲ್ಲೆಯ ಕುರಿತು ರಾಜ್ಯದ 76 ಮಂದಿ ಗಣ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕಳೆದ ಒಂದು ತಿಂಗಳಿಂದ ತಮ್ಮನ್ನು‌ ಭೇಟಿ ಮಾಡಲು ಪ್ರಯತ್ನಿಸುತ್ತಿದ್ದರೂ ಭೇಟಿ ನಿರಾಕರಣೆ ಹಿನ್ನೆಯೆಲಲ್ಲಿ ಈ ಪತ್ರ ಬರೆಯುತ್ತಿದ್ದೇವೆ ಎಂದೂ ಅವಹೇಳಿದ್ದಾರೆ.

- Advertisement -

ಲೇಖಕರು, ವಿಜ್ಞಾನಿಗಳು,ಕಲಾವಿದರು, ಛಾಯಾಗ್ರಾಹಕರು, ಪತ್ರಕರ್ತರು ಸೇರಿದಂತೆ 76 ಮಂದಿ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪೊಲೀಸ್ ಪಡೆಯು ಸಾಂವಿಧಾನಿಕ ಮಾರ್ಗವನ್ನು ಅನುಸರಿಸಿ ಸಮಾಜದ ದುರ್ಬಲ ವರ್ಗಕ್ಕೆ ರಕ್ಷಣೆ ಕೊಡಬೇಕು. ಸಾಮಾಜಿಕ ತಾಣಗಳಲ್ಲಿ ಅಲ್ಪಸಂಖ್ಯಾತರ ಬಗೆಗೆ ಪ್ರಸಾರ ಮಾಡುವ ಸುಳ್ಳು ಸುದ್ದಿ ಮತ್ತು ಉದ್ರೇಕಕಾರಿ ವಿಷಯಗಳನ್ನು ಹಂಚುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕುವ ಅಪರಾಧಿಗಳನ್ನು ಶಿಕ್ಷಿಸಬೇಕು ಮುಂತಾದ ವಿಷಯಗಳನ್ನು ಪತ್ರದಲ್ಲಿ‌ ಒಳಪಡಿಸಲಾಗಿದೆ.

ಇಂತಹ ಬೆಳವಣಿಗೆಯಿಂದಾಗಿ ರಾಜ್ಯದ ಜನರು ಸರ್ಕಾರದ ಮೇಲಿನ ನಂಬಿಕೆಯನ್ನು ಕಳಕೊಳ್ಳುತ್ತಿದ್ದಾರೆ ಆದ್ದರಿಂದ ಮುಖ್ಯಮಂತ್ರಿ ಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಕೋರಿದ್ದಾರೆ.

Join Whatsapp