ಹಾಲಿನ ಟ್ಯಾಂಕರ್ ಗೆ ಲಾರಿ ಡಿಕ್ಕಿ: ಓರ್ವ ಸಾವು, ಹಾಲಿಗಾಗಿ ಮುಗಿಬಿದ್ದ ಜನ..!

Prasthutha|

ನವದೆಹಲಿ: ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇನಲ್ಲಿ ವೇಗವಾಗಿ ಬಂದ್ ಟ್ರಕ್ ಹಾಲಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರಕ್ ಚಾಲಕ ಜಾರ್ಖಂಡ್ ಮೂಲದ 45 ವರ್ಷದ ಪ್ರೇಮ್ ಸಾಗರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

- Advertisement -


ಅಪಘಾತದ ಪರಿಣಾಮ ಟ್ಯಾಂಕರ್ನಿಂದ ಹಾಲು ಚೆಲ್ಲಲಾರಂಭಿಸಿತ್ತು. ಹಾಲಿಗಾಗಿ ಸುತ್ತಮುತ್ತಲಿನ ಜನರು ಮುಗಿಬಿದ್ದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಸ್ಥಳೀಯರು ಕೂಡಲೇ ಹಾಲಿನ ಟ್ಯಾಂಕರ್ ಗೆ ಪಾತ್ರೆಗಳು, ಬಾಟಲಿಗಳೊಂದಿಗೆ ಬಂದು ಸುತ್ತುವರೆದು ಟ್ಯಾಂಕರ್ ನಿಂದ ಹೊರಬರುವ ಹಾಲನ್ನು ತೆಗೆದುಕೊಂಡು ಹೋಗಿದ್ದಾರೆ.


ದೆಹಲಿ-ಮೀರತ್ ಎಕ್ಸ್ ಪ್ರೆಸ್ ವೇಯ ಎಬಿಇಎಸ್ ಕಾಲೇಜು ಬಳಿ ಈ ಅಪಘಾತ ಸಂಭವಿಸಿದ್ದು, ಮೀರತ್ ಕಡೆಗೆ ಹೋಗುತ್ತಿದ್ದ ಟ್ಯಾಂಕರ್ ಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಅಪಘಾತದ ನಂತರ ವ್ಯಾನ್ ನಿಂದ ಹಾಲು ಹರಿಯುತ್ತಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



Join Whatsapp