ಮಹಾರಾಷ್ಟ್ರ ಪೊಲೀಸರಿಂದ ಬಂಧನ ಭೀತಿ : ದೆಹಲಿಯಿಂದಲೇ ಪರಾರಿಯಾದ ಮತಾಂಧೆ ನೂಪುರ್ ಶರ್ಮಾ !

Prasthutha|

ನವದೆಹಲಿ:  ಪ್ರವಾದಿ ಮೊಹಮ್ಮದ್  ಪೈಗಂಬರ್‌ ಅವರ  ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್‌ ಶರ್ಮ ಬಂಧನ ಭೀತಿಯಿಂದ ದೆಹಲಿಯಿಂದ ಪರಾರಿಯಾಗಿದ್ದಾಳೆ.  ಮಹಾರಾಷ್ಟ್ರ ಪೊಲೀಸರು ದೆಹಲಿಯಲ್ಲಿ 5 ದಿನಗಳಿಂದ ಬೀಡುಬಿಟ್ಟಿದ್ದಾರೆ. ನೂಪುರ್‌ ಶರ್ಮಾಳ ಬಂಧನಕ್ಕೆ  ಆಗ್ರಹಿಸಿ ದೇಶದ ನಾನಾ ಕಡೆ ಪ್ರತಿಭಟನೆ ಗಳು ನಡೆದಿದ್ದು, ಉತ್ತರ ಪ್ರದೇಶದಲ್ಲಿ ಕಲ್ಲು ತೂರಾಟ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು.

- Advertisement -

ಇದೆಲ್ಲದರ ನಡುವೆ ನೂಪುರ್‌ ಶರ್ಮ ನಾಪತ್ತೆಯಾಗಿದ್ದು, ಎಲ್ಲಿದ್ದಾಳೆ ಎಂದು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ  ಮಹಾರಾಷ್ಟ್ರ ಪೊಲೀಸರು ದೆಹಲಿಯಲ್ಲಿ ಕಳೆದ 5 ದಿನಗಳಿಂದ ಬೀಡು ಬಿಟ್ಟಿದ್ದಾರೆ.

ನೂಪುರ್‌ ಬಂಧನಕ್ಕೆ ಬೇಕಾದ ಎಲ್ಲಾ ಸಾಕ್ಷ್ಯಗಳು ನಮ್ಮ ಬಳಿ ಇವೆ. ಆದರೆ ಅವಳು ಎಲ್ಲಿ ಅಡಗಿದ್ದಾಳೆ ಎಂಬುದು ತಿಳಿಯುತ್ತಿಲ್ಲ. ಶೀಘ್ರದಲ್ಲೇ ಅವರನ್ನು ಬಂಧಿಸುವ ವಿಶ್ವಾಸವಿದೆ ಎಂದು ಮಹಾರಾಷ್ಟ್ರ  ಪೊಲೀಸರು ತಿಳಿಸಿದ್ದಾರೆ.

- Advertisement -

Join Whatsapp