ಸನ್ಯಾಸತ್ವ ಸ್ವೀಕರಿಸಿದ ನೂಪುರ್ …!

Prasthutha|

ನವದೆಹಲಿ: ಮೂರು ದಶಕಗಳಿಂದ ಟೀವಿಗಳಲ್ಲಿ ಮಿಂಚುತ್ತಿದ್ದ ನಿರೂಪಕಿ ನೂಪುರ್ ಅಲಂಕಾರ್ ನನಗೆ ಈ ಬಂಧನ ಸಾಕಾಗಿದೆ ಎಂದು ಸನ್ಯಾಸತ್ವ ಸ್ವೀಕರಿಸಿದ್ದಾರೆ. 

- Advertisement -

ನೂಪುರ್ ಅವರು ಕಾವಿ ನಿಲುವಂಗಿಯಲ್ಲಿ ಕಾಣಿಸಿಕೊಂಡು, ತೀರ್ಥ ಯಾತ್ರೆ ಮಾಡುತ್ತ ಹಿಮಾಲಯದತ್ತ ನಡೆದಿದ್ದಾರೆ

ಈ ವರ್ಷ ಫೆಬ್ರವರಿಯಲ್ಲೇ ತಾನು ಸನ್ಯಾಸ ಸ್ವೀಕರಿಸಿದ್ದಾಗಿ ನೂಪುರ್ ಹೇಳಿದ್ದರು. ಅಧ್ಯಾತ್ಮ ನನ್ನ ಆಯ್ಕೆ. ಅದರತ್ತ ಪೂರ್ಣ ಚಿತ್ತಕ್ಕೆ ಇಷ್ಟು ಕಾಲ ಬೇಕಾಯಿತು ಎಂದು ಅವರು ಹೇಳಿದ್ದಾರೆ.

- Advertisement -

ಕೊರೋನಾ ಲಾಕ್ ಡೌನ್ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಲು ನನಗೆ ಕಲಿಸಿತು. ಮುಂಬೈಯಲ್ಲಿ ಫ್ಲಾಟ್ ಹೊಂದಿರುವ ನೂಪುರ್ ಅಲ್ಲಿ ಸಿಗುವ ಬಾಡಿಗೆಯಿಂದ ನನ್ನ ಮುಂದಿನ ಯಾತ್ರೆ ಎಂದು ಹೇಳಿದ್ದಾರೆ.

“ನಾನು ಶೋ ವೃತ್ತಿಯಲ್ಲಿದ್ದಾಗ ಜನಪ್ರಿಯತೆಗೆ ಒತ್ತು ನೀಡುತ್ತಿದ್ದೆ. ಈಗ ಆ ಒತ್ತಡವೂ ಇಲ್ಲ ಮತ್ತು ಬದುಕಿನ ನಾಟಕವೂ ಇನ್ನಿಲ್ಲ” ಎಂದು ಹೇಳಿದ್ದಾರೆ.

ನಟ ಅಲಂಕಾರ್ ಶ್ರೀವಾತ್ಸವ್ ಜೊತೆ ನೂಪುರ್ ಮದುವೆಯಾಗಿದ್ದರು. ಈಗ ಆ ದಾಂಪತ್ಯಕ್ಕೂ ಕೊನೆ ಹಾಡಿದ್ದೇನೆ. ಅಗತ್ಯವಾದ ಕಾನೂನು ಪ್ರಕ್ರಿಯೆ ಮೂಲಕ ದೂರವಾಗುವುದಕ್ಕೆ ಮೊದಲೇ ನಾನು ಸಂಸಾರದಿಂದ ಮುಕ್ತಳಾಗಿದ್ದೇನೆ ಎನ್ನುತ್ತಾರೆ ನೂಪುರ್.

ಕೆಲವು ಚಲನಚಿತ್ರಗಳಲ್ಲೂ ನಟಿಸಿರುವ ನೂಪುರ್ ಶಕ್ತಿಮಾನ್, ತಂತ್ರ, ಘರ್ ಕಿ ಲಕ್ಷ್ಮಿ ಬಿಟಿಯಾ ಮೊದಲಾದ ಕಾರ್ಯಕ್ರಮಗಳ ಭಾಗವಾಗಿದ್ದರು.



Join Whatsapp