ಕತ್ತೆ ಕದ್ದ ಆರೋಪದಲ್ಲಿ NSUI ರಾಜ್ಯಾಧ್ಯಕ್ಷನ ಬಂಧನ !

Prasthutha|

ಕರೀಮ್ ನಗರ: ಪ್ರತಿಭಟನೆಯೊಂದರಲ್ಲಿ ಕತ್ತೆಯನ್ನು ಬಳಸಿದ್ದ ಕಾಂಗ್ರೆಸ್ ಮುಖಂಡನನ್ನು, ಅದೇ ಕತ್ತೆಯನ್ನು ಕದ್ದು ತಂದ ಆರೋಪದ ಮೇಲೆ ‌ಪೊಲೀಸರು ಬಂಧಿಸಿರುವ ಘಟನೆ ತೆಲಂಗಾಣದ ಕರೀಮ್ ನಗರದಲ್ಲಿ ನಡೆದಿದೆ.

- Advertisement -

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಹುಟ್ಟು ಹಬ್ಬದ ದಿನದಂದು ಕಾಂಗ್ರೆಸ್  ಪಕ್ಷದ ಸದಸ್ಯರು ಪ್ರತಿಭಟನಾ ಸಭೆ ಆಯೋಜಿಸಿದ್ದರು. ಈ ವೇಳೆ ತೆಲಂಗಾಣ NSUI ಅಧ್ಯಕ್ಷ ವೆಂಕಟ್ ಬಲ್ಮೂರ್, ಕತ್ತೆಯೊಂದರ ಮುಖಕ್ಕೆ, ಮುಖ್ಯಮಂತ್ರಿ ಕೆಸಿಆರ್ ಭಾವಚಿತ್ರವನ್ನು ಅಂಟಿಸಿ‌ ಕೇಕ್ ತಿನ್ನಿಸಿದ್ದರು. ಇದರ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು.

ಆದರೆ ಜಮ್ಮಿಂಕುಂಟ ನಿವಾಸಿ ರಾಜ್’ಕುಮಾರ್ ಎಂಬುವವರು ತಮ್ಮ ಕತ್ತೆಯನ್ನು NSUI ಅಧ್ಯಕ್ಷ ವೆಂಕಟ್ ಬಲ್ಮೂರ್ ತಮ್ಮ  ಆರು ಮಂದಿ ಸ್ನೇಹಿತರ ಜೊತೆಗೂಡಿ ಕದ್ದೊಯ್ದಿರುವುದಾಗಿ ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದರು.

- Advertisement -

ಕರೀಮ್ ನಗರದ ಸಾತವಾಹನ ವಿಶ್ವವಿದ್ಯಾಲಯದ ಬಳಿ ವೆಂಕಟ್ ಬಲ್ಮೂರ್ ಅವರನ್ನು ಪೊಲೀಸರು ಬಂಧಿಸಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ, IPC 143, 153, 504, 379 ಹಾಗೂ 149, ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ, 1960 ರ ಸೆಕ್ಷನ್ 11 ದಾಖಲಿಸಲಾಗಿದೆ.



Join Whatsapp