ಚಿಕ್ಕಮಗಳೂರು: ಅಪಘಾತದಲ್ಲಿ NSG ಕಮಾಂಡೋ ಮೃತ್ಯು

Prasthutha|

ಚಿಕ್ಕಮಗಳೂರು : ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಎನ್.ಎಸ್.ಜಿ. ಕಮಾಂಡೋ ಒಬ್ಬರು ದಾರುಣವಾಗಿ ಮೃತಪಟ್ಟಿರುವ ದುರ್ಘಟನೆ ಬುಧವಾರ ಮುಂಜಾನೆ ಕುಣಿಗಲ್ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಬಿ.ಎಂ ರಸ್ತೆ ಹೇಮಾವತಿ ಸರ್ಕಲ್ ಸಮೀಪ ನಡೆದಿದೆ.

- Advertisement -

ತರೀಕೆರೆ ತಾಲೂಕಿನ ತಣಿಗೇಬೈಲು ನಿವಾಸಿ ದೀಪಕ್ (31) ಮೃತ ದುರ್ದೈವಿ ಯೋಧ ಎಂದು ತಿಳಿದು ಬಂದಿದೆ. ದೀಪಕ್ ಮಹರಾಷ್ಟ್ರದ ಮುಂಬೈನಲ್ಲಿ ಐಟಿಬಿಪಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋವಾಗಿ ನೇಮಕವಾಗಿದ್ದರು. ಒಂದು ತಿಂಗಳ ರಜೆ ಮೇಲೆ ಊರಿಗೆ ಬಂದಿದ್ದು ಹೊಸ ಬೈಕಿನಲ್ಲಿ ತನ್ನ ಗ್ರಾಮ ಜೈಪುರಕ್ಕೆ ಬಂದು ಬೆಂಗಳೂರಿನಲ್ಲಿ ಇರುವ ತನ್ನ ಪತ್ನಿಯನ್ನು ನೊಡಲೆಂದು ಬೈಕ್ ನಲ್ಲಿ ಹೊಗುತ್ತಿರ ಬೇಕಾದರೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

2020ರಲ್ಲಿ ದೀಪಕ್ ಮದುವೆಯಾಗಿದ್ದರು. ಮನೆಯಲ್ಲಿ ಸಮಾರಂಭಕ್ಕೆಂದು ರಜೆಯಲ್ಲಿ ಬಂದಿದ್ದರು, ಹೊಸ ಬೈಕ್ ಖರೀದಿಸಿ ಕರ್ತವ್ಯಕ್ಕೆ ವಾಪಾಸಾಗುತ್ತಿದ್ದರು ಎಂದು ತಿಳಿದು ಬಂದಿದೆ.

- Advertisement -

ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp