ಕುಖ್ಯಾತ ರೌಡಿ ಸಹೋದರರ ಸೆರೆ

Prasthutha|

ಬೆಂಗಳೂರು; ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ 15 ದಿನಗಳಲ್ಲೇ ಮಾರಕಾಸ್ತ್ರ ಝಳಪಿಸಿದ್ದ ಕುಖ್ಯಾತ ರೌಡಿ ಸಹೋದರರನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

- Advertisement -

ದಕ್ಷಿಣ ವಿಭಾಗದಲ್ಲಿ ನಟೋರಿಯಸ್ ಗಳಾಗಿ ಗುರುತಿಸಿಕೊಂಡಿರುವ ಸಂಜು ಹಾಗೂ ವೀರು ಬಂಧಿತ ರೌಡಿಗಳಾಗಿದ್ದಾರೆ.

ಕುಳ್ಳು ರಿಜ್ವಾನ್ ಸಹಚರರಾಗಿರುವ ಸಂಜು ಹಾಗೂ ವೀರು ಹದಿನೈದು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದರು.ಬಳಿಕ ಒಂದು ವಾರದ ಹಿಂದೆ ಮುನೇಶ್ವರ ಬ್ಲಾಕ್ ಬಳಿ ವಿರೋಧಿ ಬಣದ ಮನೋಜ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಠಾಣಾ ಪೊಲೀಸರು ಇದೀಗ ಆರೋಪಿ ಸಹೋದರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ



Join Whatsapp