ಬಾಯಿಗೆ ಬಂದಂತೆ ಮಾತಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ತಾಕತ್ ಇಲ್ಲ: ಬಿಜೆಪಿ ವಿರುದ್ಧ ಸದಾನಂದಗೌಡ ಬೇಸರ

Prasthutha|

ಬೆಂಗಳೂರು: ಬಾಯಿಗೆ ಬಂದಂತೆ ಮಾತಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ರಾಜ್ಯ ನಾಯಕರಿಗೆ ತಾಕತ್ ಇಲ್ಲ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದ್ದಾರೆ.

- Advertisement -

ಈ ಮೂಲಕ ಬಹಿರಂಗವಾಗಿ ಮಾತನಾಡುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಬೇಕೆನ್ನುವ ಅರ್ಥದಲ್ಲಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಡಝನ್ ಗಟ್ಟಲೇ ನಾಯಕರು ಪಕ್ಷದ ವಿರುದ್ಧ ಮಾತಾಡುತ್ತಿದ್ದಾರೆ. ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ ಸಹ ಈ ಹಿಂದೆ ಸಿಎಂ ಆಗಿದ್ದ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದರು. ಆಗ ನಾನು ಒಂದೇ ಗಂಟೆಯಲ್ಲಿ ಅವರಿಗೆ ನೋಟೀಸ್ ಕೊಟ್ಟು ಸಸ್ಪೆಂಡ್ ಮಾಡಿದ್ದೆ. ಯತ್ನಾಳ್ ರನ್ನು ನಾನು ಸಸ್ಪೆಂಡ್ ಮಾಡಿ ಬಳಿಕ ಯಡಿಯೂರಪ್ಪನವರು ಮತ್ತೆ ಒತ್ತಡ ಹಾಕಿ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಈಗ ನಾನು ಅನುಭವಿಸುತ್ತಿದ್ದೇವೆ ಎಂದರು.

Join Whatsapp